ದೇವರು ತನ್ನ ಸ್ವಂತ ಸ್ವರೂಪ ಮತ್ತು ಹೋಲಿಕೆಯಲ್ಲಿ ಮನುಕುಲವನ್ನು ಸೃಷ್ಟಿಸಿದ್ದಾನೆ ಎಂಬ ನಂಬಿಕೆಯನ್ನು ಜನಸಾಮಾನ್ಯರ೦ತೆ ೧೯ ನೇ ಶತಮಾನದ ಮಧ್ಯಭಾಗದವರೆಗೆ ಹೆಚ್ಚಿನ ಪಾಶ್ಚಿಮಾತ್ಯ ವಿಜ್ಞಾನಿಗಳೂ ಹೊಂದಿದ್ದರು
ಗ್ರಹದ ಎಲ್ಲಾ ಜೀವಿಗಳು ದೈವಿಕ ಶಕ್ತಿಯೊಂದರಿ೦ದ ಹುಟ್ಟಿಕೊಂಡಿವೆ ಎಂದು ಅವರು ಭಾವಿಸಿದರು.
ಚಾರ್ಲ್ಸ್ ಡಾರ್ವಿನ್ ಬರುವವರೆಗೆ.
ಚಾರ್ಲ್ಸ್ ಡಾರ್ವಿನ್
ಕೆಲವು ಸಂಶೋಧಕರು ಈಗಾಗಲೇ ಜೀವಿಗಳ ಜಾತಿ ಅಥವಾ ವರ್ಗಗಳ ವಿಕಸನದ ಬಗ್ಗೆ ಮಾತನಾಡುತ್ತಿದ್ದರಾದರೂ ಬ್ರಿಟಿಷ ನೈಸರ್ಗಿಕವಾದಿ ವಿಜ್ಞಾನಿ ಡಾರ್ವಿನ್ ನೈಸರ್ಗಿಕ ಆಯ್ಕೆಯಿಂದ ವಿಕಸನವು ಹೇಗೆ ಸಂಭವಿಸಬಹುದು ಎಂಬುದನ್ನು ಪುರಾವೆಗಳೊಂದಿಗೆ ವಿವರಿಸಿದ ಮೊದಲಿಗರು.
ಅವರ ಸಿದ್ಧಾಂತವು, ಮಾನವರ ಉಗಮದ ಬಗ್ಗೆ ಹೊಸ ವಿವರಣೆಯನ್ನು ನೀಡುವುದರ ಮೂಲಕ ಜೀವಶಾಸ್ತ್ರವನ್ನು ಆಮೂಲಾಗ್ರವಾಗಿ ಬದಲಾಯಿಸಿತು
ಇದು ಅವರನ್ನು ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರನ್ನಾಗಿ ಮಾಡಿತು.
ಆದರೆ ಅಲ್ಲಿಗೆ ತಲುಪಲು ಅವರು ಒಂದು ಅಸಾಧಾರಣ ಪ್ರಯಾಣವನ್ನು ಕೈಗೊಳ್ಳಬೇಕಾಯಿತು
ನೂರಾರು ಪ್ರಯೋಗಗಳನ್ನು ಕಾರ್ಯಗತಗೊಳಿಸಿ ತನ್ನ ವಿಚಾರಗಳನ್ನು ಪರಿಷ್ಕರಿಸಲು 20 ವರ್ಷಗಳ ಕಾಲವನ್ನು ಕಳೆಯಬೇಕಾಯಿತು .
ಡಾರ್ವಿನ್ನ ದೊಡ್ಡ ದಂಡಯಾತ್ರೆ
1831 ರಲ್ಲಿ ಡಾರ್ವಿನ್ 22 ವರ್ಷ ವಯಸ್ಸಿನವನಾಗಿದ್ದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದರು
ಒಂದು ಮಹತ್ವದ ಕಾರ್ಯಯಾತ್ರೆಗೆ ನಿಸರ್ಗಶಾಸ್ತ್ರಜ್ಞನಾಗಿ ಸೇರಿಕೊಳ್ಳಲು ಆಹ್ವಾನಿಸಿದಾಗ.
ಅವರು HMS ಬೀಗಲ್ ಹೆಸರಿನ ಹಡಗನ್ನು ಹತ್ತಿದರು ಮತ್ತು ಸುಮಾರು ಐದು ವರ್ಷಗಳ ಕಾಲ ಹಲವಾರು ಖಂಡಗಳನ್ನು ಪ್ರಯಾಣಿಸಿದರು
ದಕ್ಷಿಣ ಅಮೆರಿಕಾದಿಂದ ಅವರು ಡಜನ್ಗಟ್ಟಲೆ ಜೀವಂತ ಮಾದರಿಗಳು, ಚಿತ್ರೀಕರಣೆಗಳು
ವಿವರಣೆಗಳು ಮತ್ತು ಪಳೆಯುಳಿಕೆಗಳನ್ನು ಮರಳಿ ತಂದರು.
ಈ ಪಳೆಯುಳಿಕೆಗಳು ಅವರಿಗೆ ವಿಕಾಸದ ಬಗ್ಗೆ ಮೊದಲ ಸುಳಿವುಗಳನ್ನು ನೀಡಿತು.
ಉದಾಹರಣೆಗೆ, ಸ್ಲಾತ್ ಕರಡಿಗೆ ಹೋಲುವ ೧೦,೦೦೦ ವರ್ಷಗಳ ಹಿ೦ದೆ ಅಸ್ತಿತ್ವದಲ್ಲಿದ್ದು ನಂತರ ಅಳಿದುಹೋಗಿರುವ ದೈತ್ಯ ಪ್ರಾಣಿಯಾದ ಮಿಲೋಡಾನ್ನ ಅವಶೇಷಗಳನ್ನು ಗಮನಿಸಿ
ಆ ಸಾಮ್ಯತೆಗಳು ಬಹುಶಃ ಕಾಕತಾಳೀಯವಲ್ಲ, ಯಾವುದೋ ರೀತಿಯ ನಂಟು ಇರಲೇ ಬೇಕು ಎಂದು ಅವರು ಭಾವಿಸಿದರು..
ಗ್ಯಾಲಪಗೋಸ್ ದ್ವೀಪಗಳು
ಗ್ಯಾಲಪಗೋಸ್ ದ್ವೀಪಗಳಿಗೆ ಭೇಟಿ ಸಲ್ಲಿಸಿದಾಗ, ಡಾರ್ವಿನ್ ಅದರ ಹತ್ತಿರದ ದ್ವೀಪಗಳಲ್ಲಿ ವಾಸಿಸುತ್ತಿದ್ದ ದೈತ್ಯ ಆಮೆಗಳನ್ನು ವೀಕ್ಷಿಸಿದರು. ಆದರೆ ಪ್ರತಿ ದ್ವೀಪದಲ್ಲಿ ಈ ಜೀವಿಗಳು ವಿಶಿಷ್ಟವಾದ ಭೌತಿಕ ಗುಣಲಕ್ಷಣಗಳನ್ನು ತೋರಿಸಿದವು ಎ೦ಬುದನ್ನು ಅವರು ಲಕ್ಷಿಸಿದರು .
ಸಸ್ಯವರ್ಗವು ಹೇರಳವಾಗಿರುವ ಆರ್ದ್ರ ಪ್ರದೇಶಗಳಲ್ಲಿ ಆಮೆಗಳು ಚಿಕ್ಕ ಕುತ್ತಿಗೆಯನ್ನು
ಮತ್ತು ಗುಮ್ಮಟ-ಆಕಾರದ ಚಿಪ್ಪನ್ನು ಹೊಂದಿದ್ದವು. ಆದರೆ ಒಣ ಪರಿಸರದ ದ್ವೀಪಗಳಲ್ಲಿ ಅವು
ಹಲ್ಲಣ ತರಹದ ಚಿಪ್ಪನ್ನೂ ಮತ್ತು ಉದ್ದನೆಯ ಕುತ್ತಿಗೆಯನ್ನೂ ಹೊಂದಿರುವವು ಎಂದು ಕಂಡುಬಂದಿತು . ಆ ವ್ಯತ್ಯಾಸಕ್ಕೆ ಕಾರಣಗಳನ್ನು ವಿವರಿಸಬಹುದೇ?
ಸ್ವದೇಶಕ್ಕೆ ಹಿಂದಿರುಗಿದ ನಂತರ ಪ್ರಾಣಿಗಳ ತಳಿಗಾರರು ಮತ್ತು ತೋಟಗಾರರು ಹೊಸ ಪ್ರಭೇದಗಳನ್ನು ರಚಿಸಲು ಮಿಶ್ರತಳಿ ಪ್ರಾಣಿಗಳು ಅಥವಾ ಸಸ್ಯ ಜಾತಿಗಳನ್ನು ಹೇಗೆ ಹುಟ್ಟಿಸುತ್ತಾರೆ ಎಂಬುದನ್ನು ಗಮನಿಸಲು ಡಾರ್ವಿನ್ ಸಮಯ ಕಳೆದರು
ಆ ಸೃಷ್ಟಿ ಯಶಸ್ವಿಯಾಗಲು ಮನುಷ್ಯ ಮಾಡಿದ ಕೃತಕ ಆಯ್ಕೆ ಮುಖ್ಯವಾಗಿತ್ತು ಎಂಬದು ಸ್ಪಷ್ಟವಾಗಿತ್ತು
ನೈಸರ್ಗಿಕ ಆಯ್ಕೆ
ನೈಸರ್ಗಿಕ ಪ್ರಪಂಚವು ಬಹುಶಃ ಅದೇ ರೀತಿಯ ಆಯ್ಕೆಯನ್ನು ಮಾಡಿದೆ ಎಂದು ಡಾರ್ವಿನ್ ಅರಿತುಕೊಂಡರು.
ಆದರೆ ಅವರು ಥಾಮಸ್ ರಾಬರ್ಟ್ ಮಾಲ್ತಸ್ ಅವರ ಕೃತಿಯನ್ನು ಓದುವವರೆಗೂ ಅದು ಹೇಗೆ ಸಂಭವಿಸಿತು ಎಂಬುದನ್ನು ವಿವರಿಸಲು ಸಾಧ್ಯವಾಗಲಿಲ್ಲ. 18 ನೇ ಶತಮಾನದ ಬ್ರಿಟಿಷ್ ಬುದ್ಧಿಜೀವಿ ಮಾಲ್ತಸ. ಜನಸಂಖ್ಯಾಶಾಸ್ತ್ರದ ಒಂದು ಪ್ರಬಂಧದಲ್ಲಿ ಈ ರೀತಿ ಹೇಳಿದರು : ಯುರೋಪಿನಲ್ಲಿ ಜನಸಂಖ್ಯೆ ಸರ್ವದಾ ಬೆಳೆಯುವುದರಿಂದ ಒಂದು ಹಂತದಲ್ಲಿ ಜನನಿಬಿಡತೆಯು ಲಭ್ಯವಿರುವ ಆಹಾರ ಸರಬರಾಜುಗಳಿಗಿಂತ ಹೆಚ್ಚು ಹೆಚ್ಚಾಗುತ್ತದೆ. ಮತ್ತು ಆ ಹಂತದಲ್ಲಿ ಅದು ಉಳಿವಿಗಾಗಿ ಹೋರಾಟವನ್ನು ಉಂಟುಮಾಡುತ್ತದೆ.
ವಿಕಸನ ವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಲು ಈ ಕಲ್ಪನೆಯು ಡಾರ್ವಿನ್ಗೆ ಸಹಾಯ ಮಾಡಿತು.
ಪ್ರಕೃತಿಯಲ್ಲಿ ಉಳಿವಿಗಾಗಿ ಹೋರಾಟವಿದೆ. ಬದುಕುಳಿದವನು ಉಳಿದೆಲ್ಲರಿಗಿಂತ ಬಲಿಷ್ಠ ವ್ಯಕ್ತಿಯಲ್ಲ
ಬದಲಾಗಿ ಯಾರು ವಾಸಿಸುವ ಪರಿಸರಕ್ಕೆ ಅತಿ ಉತ್ತಮವಾಗಿ ಹೊಂದಿಕೊಳ್ಳುತ್ತಾನೋ ಆ ಜೀವಿ.
ಒಂದು ಜೀವಿಯು ತಾನು ಬದುಕಲು ಸಹಾಯ ಮಾಡುವ ಯಾವುದೇ ವಿಶೇಷ ಲಕ್ಷಣ ಯಾ ಸ್ವಭಾವವನ್ನು ಹೊಂದಿದ್ದರೆ ಅದು ಸಂತಾನೋತ್ಪತ್ತಿಯಲ್ಲಿ ಹೆಚ್ಚು ಯಶಸ್ವಿಯಾಗುತ್ತದೆ. ಪರಿಸರಕ್ಕೆ ಹೊಂದಿಕೊಳ್ಳದವರು ಸಂತತಿಯಿಲ್ಲದೆ ಸಾಯುತ್ತಾರೆ.
ಸಂತಾನೋತ್ಪತ್ತಿ ಮಾಡುವಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಿರುವ ಜೀವಿಗಳು ತಮ್ಮ ಗುಣಲಕ್ಷಣಗಳನ್ನು ಅವರ ವಂಶ ಪರಂಪರೆಗೆ ಮತ್ತು ಹೀಗೆ ಮುಂದುವರೆದು ಈ ವ್ಯತ್ಯಾಸಗಳು ಹೊಸ ಜೀವ ಜಾತಿಯಾಗಿ ಕೊನೆಗೊಳ್ಳುವವರೆಗೆ ರವಾನಿಸಿದವು. ಅದಕ್ಕಾಗಿಯೇ ಗ್ಯಾಲಪಗೋಸ್ ಆಮೆಗಳ ನಡುವಿನ ವ್ಯತ್ಯಾಸಗಳು ವಿಕಸನದ ಉತ್ಪನ್ನವಾಗಿದೆ.
ಜೀವ ಜಾತಿಗಳ ಮೂಲ
ಒಣ ಪರಿಸರದಲ್ಲಿ ಉದ್ದವಾದ ಕುತ್ತಿಗೆಯನ್ನು ಹೊಂದಿರುವವರು ಆಹಾರವನ್ನು ಪಡೆಯಲು ಸುಲಭವಾಗಿ ಪೊದೆಗಳನ್ನು ತಲುಪಬಹುದು.
ಆರ್ದ್ರ ವಾತಾವರಣದಲ್ಲಿ ವಾಸಿಸುವವರು ಹುಲ್ಲು ತಿಂದು ಅವರ ಚಿಕ್ಕ ಕುತ್ತಿಗೆ ಮತ್ತು ಗುಮ್ಮಟ-ಆಕಾರದ ಚಿಪ್ಪೆಗಳ ಕಾರಣ ಪರಭಕ್ಷಕಗಳಿಂದ ತಮ್ಮನ್ನು ರಕ್ಸಿಸಿ ಕೊಳ್ಳ ಬಹುದು
ಮಾನವರು ಸೇರಿದಂತೆ ಎಲ್ಲಾ ಜಾತಿಗಳನ್ನು ಸ್ವತಂತ್ರವಾಗಿ ರಚಿಸಲಾಗಿಲ್ಲ ಆದರೆ ಜೀವ ಜಾತಿಗಳೆಲ್ಲ ಒಬ್ಬ ಸಾಮಾನ್ಯ ಪೂರ್ವಜರಿಂದ ಬಂದವರು ಎಂದು ಡಾರ್ವಿನ್ ಹೇಳಿದರು . ಅದರಿಂದಾಗಿ ಭೂಮಿಯ ಮೇಲಿನ ಜೀವನವು ವೈವಿಧ್ಯಗೊಳಿಸಲು ಪ್ರಾರಂಭಿಸಿತು.
ತಮ್ಮ ಪ್ರವಾಸದ ಇಪ್ಪತ್ತು ವರ್ಷಗಳ ನಂತರ ಡಾರ್ವಿನ್ ಸಾವಿರಾರು ಪುಟಗಳು ಬರೆದಿದ್ದರು ಆದರೆ ಏನನ್ನೂ ಪ್ರಕಟಿಸಲಿಲ್ಲ.ಬಹುಶಃ ಅವರು ನಿರಾಕರಿಸಲಾಗದ ಪುರಾವೆಗಳನ್ನು ಹೊಂದಲು ಬಯಸಿದ್ದರು,
ಏಕೆಂದರೆ ತಮ್ಮ ಸಿದ್ಧಾಂತವು ಸಾಕಷ್ಟು ಕೋಲಾಹಲವನ್ನು ಉಂಟುಮಾಡುತ್ತದೆ ಎಂದು ಅವರು ತಿಳಿದಿದ್ದರು.
ಆದರೆ ಒಬ್ಬ ಅಭಿಮಾನಿ ಮತ್ತು ಸಹವರ್ತಿ ನೈಸರ್ಗಿಕವಾದಿ, ಆಲ್ಫ್ರೆಡ್ ರಸ್ಸೆಲ್ ವ್ಯಾಲೇಸ್ ಅವರಿಂದ ಪತ್ರವನ್ನು ಸ್ವೀಕರಿಸಿದಾಗ ಎಲ್ಲವೂ ಬದಲಾಯಿತು. ವ್ಯಾಲೇಸ್ ತಮ್ಮ ಪತ್ರದಲ್ಲಿ “ವಿಕಸನವು ನೈಸರ್ಗಿಕ ಆಯ್ಕೆಯಿಂದ ಉತ್ಪತ್ತಿಯಾಯಿತು ಎನ್ನುವ ಅದೇ ತೀರ್ಮಾನ ವನ್ನು ತಾವೂ ತಲುಪಿದ್ದೇವೆ” ಎಂದು ಹೇಳಿದರು
ವ್ಯಾಲೇಸ್ ವಿಕಸನ ಸಿದ್ಧಾಂತದ ಏಕೈಕ ಕೀರ್ತಿ ಪಡೆದು ಕೊಳ್ಳುವ ಸಾಧ್ಯತೆಯನ್ನು ಎದುರಿಸುತ್ತ ಡಾರ್ವಿನ್ ಗಾಬರಿಯಾದರು . ಇಬ್ಬರು ನೈಸರ್ಗಿಕವಾದಿಗಳು ತಮ್ಮ ಸಂಶೋಧನೆಗಳನ್ನು ವಿವರಿಸುವ ಜಂಟಿ ಪತ್ರವನ್ನು ಪ್ರಸ್ತುತಪಡಿಸಲು ಒಪ್ಪಿಕೊಂಡರು.
ಡಾರ್ವಿನ್ನ ಸಂಶೋಧನೆಯು ವಿಕ್ಟೋರಿಯನ್ ಬ್ರಿಟನ್ನನ್ನು ಬೆಚ್ಚಿಬೀಳಿಸುತ್ತದೆ
ಆದರೆ ಒಂದು ವರ್ಷದ ನಂತರ ಡಾರ್ವಿನ್ ತನ್ನ ಪುಸ್ತಕವನ್ನು ಆನ್ ದಿ ಒರಿಜಿನ್ ಆಫ್ ಸ್ಪೀಷಿಸ್ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದನು
ಅವರು ವೈಜ್ಞಾನಿಕ ಸಮುದಾಯವನ್ನು ಮೀರಿದ ಪ್ರಸಿದ್ಧ ವ್ಯಕ್ತಿಯಾದರು. .ಅವರ ಸಂಶೋಧನೆಗಳು ವಿಕ್ಟೋರಿಯ ಕಾಲದ ಬ್ರಿಟನ್ನ ಅಡಿಪಾಯವನ್ನು ಅಲ್ಲಾಡಿಸಿದವು. ತನ್ನ ಕಾಲದಲ್ಲಿ ಕೋಪರ್ನಿಕಸ್ ಸಾಧಿಸಿದಂತೆ , ವೈವಿಧ್ಯತೆಯು ದೇವರ ಯಾವುದೇ ಹಸ್ತಕ್ಷೇಪವಿಲ್ಲದೆ ಜೈವಿಕ ಪ್ರಕ್ರಿಯೆಯಿಂದ ಬಂದಿದೆಎಂದು ವಿವರಿಸುವ ಮೂಲಕ ಡಾರ್ವಿನ್ ಎಲ್ಲಾ ಜನರ ವಿಚಾರ ಮತ್ತು ಅರಿವುಗಳನ್ನು ಆಮುಲಾಗ್ರಹ ಬದಲಾಯಿಸಿದರು.
ಡಾರ್ವಿನ್ ಮಾನವರನ್ನು ಗ್ರಹದ ಎಲ್ಲಾ ಜೀವಿಗಳಂತೆಯೇ ಒಂದೇ ವಿಕಸನೀಯ ಮಟ್ಟದಲ್ಲಿ ಇರಿಸಿದರು.
ವೈಜ್ಞಾನಿಕ ಪ್ರಗತಿಗಳು ಅವರ ಸಿದ್ಧಾಂತವನ್ನು ದೃಢೀಕರಿಸಿವೆ ಮತ್ತು ಕ್ಯಾಥೋಲಿಕ್ ಸಭೆಯೂ ಸಹ
ವಿಕಸನವು ದೈವ ನಂಬಿಕೆಯೊಂದಿಗೆ ಹೊಂದಿಕೊಳ್ಳುತ್ತದೆ ಎಂದು ದಶಕಗಳ ನಂತರ ಒಪ್ಪಿಕೊಂಡಿತು. ಈಗ ನಾವು ವಿಕಸನವನ್ನು ಸತ್ಯವೆಂದು ಅರಿತುಕೊಂಡಿದ್ದೇವೆ.
ಭೂಗ್ರಹವು ಬದಲಾಗುತ್ತಲೇ ಇರುತ್ತದೆ - ಕೆಲವೊಮ್ಮೆ ಪ್ರಬಲವಾದ ರೀತಿಯಲ್ಲಿ ; ಮತ್ತು ನಾವೂ ಅದರೊಂದಿಗೆ ಬದಲಾಗುತ್ತಲೇ ಇರುತ್ತೇವೆ.
( ಬಿ ಬಿ ಸಿ ಆಧಾರಿತ)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ