ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ತೊಟ್ಟಿಕ್ಕುವ ಬೆಳವಣಿಗೆ   ಟ್ರಿಕಲ್-ಡೌನ್ ಅರ್ಥಶಾಸ್ತ್ರದ ಕುತರ್ಕ: 'ಸಂಪತ್ತು ಸೃಷ್ಟಿ' ಯಾರಿಗೆ ಲಾಭಕಾರಕ ? ತೆರಿಗೆ ಕಡಿತ,  ಮತ್ತು ಖಾಸಗಿ ವಲಯಕ್ಕೆ,   ವಲಯದ ಶ್ರೀಮಂತರಿಗೆ , ಲಾಭದಾಯಕವಾದ ಇತರ ಹಣಕಾಸಿನ ಪ್ರೋತ್ಸಾಹ, ಈ ತರಹದ ನವ-ಉದಾರವಾದಿ ಅರ್ಥಿಕ ನೀತಿಗಳನ್ನು ಸಮರ್ಥಿಸಿಕೊಳ್ಳಲು  ನಿಧಾನವಾಗಿ , ತೊಟ್ಟಿಕ್ಕುವ ಮೂಲಕ, ಆದರೆ ಕೊನೆಗೂ ಬಡವರಿಗೆ ಸ೦ಪತ್ತಿನ ಲಭ್ಯತೆಯ,  ಸಿದ್ಧಾಂತವನ್ನು  ಸಾಮಾನ್ಯವಾಗಿ  ಉದ್ಧರಿಸಲಾಗುತ್ತದೆ.  ವಾಸ್ತವದಲ್ಲಿ ಅಂತಹ ನವ ಉದಾರವಾದಿ ಆರ್ಥಿಕ ನೀತಿಗಳು - (ನಿಯೊ-ಲಿಬರಲಿಸ೦ - Neo-Liberalism - .ಮಾರುಕಟ್ಟೆ-ಆಧಾರಿತ ಸುಧಾರಣಾ ನೀತಿಗಳಾದ "ಬೆಲೆ ನಿಯಂತ್ರಣಗಳನ್ನು ತೆಗೆದುಹಾಕುವುದು, ಬಂಡವಾಳ ಮಾರುಕಟ್ಟೆಗಳನ್ನು ಅನಿಯಂತ್ರಿತಗೊಳಿಸುವುದು, ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವುದು" ಮತ್ತು ವಿಶೇಷವಾಗಿ ಖಾಸಗೀಕರಣ ಮತ್ತು ಉಗ್ರ ಆರ್ಥಿಕ ಸ೦ಯಮದ  ಮೂಲಕ ಆರ್ಥಿಕತೆಯಲ್ಲಿ ರಾಜ್ಯದ ಪ್ರಭಾವ ಕಡಿಮೆಗೊಳಿಸುವದು)  ಆರ್ಥಿಕ ಅಸಮಾನತೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಯಲ್ಲಿ "ಸಂಪತ್ತು ಸೃಷ್ಟಿಕಾರರ" ಪಾತ್ರವನ್ನು ಅನೇಕ ಸಂದರ್ಭಗಳಲ್ಲಿ - ೨೦೧೯ ರ ಸ್ವಾತ೦ತ್ರ್ಯದಿನ ಭಾಷಣದಲ್ಲಿ, ಮತ್ತು ಲೋಕಸಭಾ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ  ಧನ್ಯವಾದಗಳು ಸಲ್ಲಿಸುವ ಸ೦ದರ್ಭದಲ್ಲಿ - ಹೊಗಳಿದ್ದಾರೆ.  ಅವರದೊ೦ದ
ಇಮೇಜ್
      ರೈತರ ಸ೦ಘಟನೆಯ ಸಮರ್ಥನೆಯಲ್ಲಿ   ೨೦೨೦ ರ ಭಾರತದ ಮೂರು ಕೃಷಿ ಕಾಯ್ದೆಗಳು ರೈತರಲ್ಲಿ ಆಳವಾದ ಮತ್ತು ವ್ಯಾಪಕ ಅಸಮಾಧಾನವನ್ನು ಸೃಷ್ಟಿಸಿವೆ. ನಡೆಯುತ್ತಿರುವ ಆಂದೋಲನದ ಮೂಲ ಕಾರಣಗಳನ್ನು ರೈತರ ದುರ್ಬಲತೆ, ಸಾಮಾಜಿಕ-ಪರಿಸರ ವ್ಯವಸ್ಥೆಗಳು ಮತ್ತು ಪರಿಸರ ಆಡಳಿತದ ದೃಷ್ಟಿಕೋನಗಳಿಂದ ಪರಿಶೀಲಿಸುತ್ತಾ, ಈ ಸುಧಾರಣೆಗಳು ಪ್ರಸ್ತುತ ಭಾರತೀಯ ಕೃಷಿಯನ್ನು ಮುಗ್ಗರಿಸುವ ಮತ್ತು ಭವಿಷ್ಯದಲ್ಲಿಯೂ ಹಾಗೆ ಮಾಡುವ ಮೂರು ಪ್ರಮುಖ ಸಮಸ್ಯೆಗಳು, ಅ೦ದರೆ ಅನಿಶ್ಚಿತತೆ,  ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಮತ್ತು ಸೈರಿಸುವಿಕೆ, ಇವನ್ನು ಪರಿಹರಿಸುವುದಿಲ್ಲ ಎಂದು ನಾನು ವಾದಿಸುತ್ತೇನೆ. ಸುಧಾರಣೆಗಳೊಂದಿಗೆ, ಈ ಮೂರು ಕೃಷಿ ಮಸೂದೆಗಳು ಭಾರತದ ಕೃಷಿಯನ್ನು ಪರಿವರ್ತಿಸುವ ಮುಖ್ಯ ಕಾರ್ಯಕರ್ತರುಗಳಾಗಿ ಪ್ರಬಲ ಮಾರುಕಟ್ಟೆ ಚಟುವಟಿಕೆಗಾರರನ್ನು ಸ್ಥಾಪಿಸುತ್ತವೆ. ಆದಾಗ್ಯೂ, ಬಹುಸಂಖ್ಯಾತರಾಗಿರುವ ಮತ್ತು ಉತ್ತಮ ಬೆಲೆಗಳು, ಕೃಷಿ ಪದ್ಧತಿಗಳು ಮತ್ತು ಅಂತರ್ಜಲ ಸುಸ್ಥಿರತೆಗಾಗಿ ತಮ್ಮ ಪ್ರಯತ್ನಗಳನ್ನು ಹೆಚ್ಚಾಗಿ ಕ್ರೋಢೀಕರಿಸುತ್ತಿರುವ ಸಣ್ಣ ಹಿಡುವಳಿದಾರರ ರಾಷ್ಟ್ರವಾಗಿ, ರೈತ ಸಂಸ್ಥೆಗಳು ಕೃಷಿ ಪರಿವರ್ತನೆಗೆ ಮುಂದಾಗುವ ಉತ್ತಮ ಸ್ಥಿತಿಯಲ್ಲಿದ್ದಾರೆ. ದೊಡ್ಡ ಕಾರ್ಪೊರೇಟ್‌ಗಳ ವಿರುದ್ಧ ಹೋರಾಡಿದಾಗ, ರೈತರು ಮತ್ತು ಅವರ ಸಂಸ್ಥೆಗಳು ಉತ್ತಮ ವ್ಯವಹಾರ ಒಪ್ಪ೦ದಗಳಿಗಾಗಿ  ಚೌಕಾಶಿ ಮಾಡಲು ಮತ್ತು ನೀತಿಯನ್ನು ರೂಪಿಸುವ ವಿಶಾಲ ರಾಜಕೀಯ ಆರ್ಥಿಕತೆಯನ್ನು ರೂಪಿಸಲು ಕಸ
ಇಮೇಜ್
  ಜಾಗತಿಕ ಹಸಿವಿನ ಸೂಚ್ಯಂಕ :   ೧೧೬ ದೇಶಗಳಲ್ಲಿ ೧೦೧ನೇ ಸ್ಥಾನದಲ್ಲಿದೆ ಭಾರತ ಜಾಗೃತಿ ಚಂದ್ರ ದಿ ಹಿ೦ದು , ಹೊಸದಿಲ್ಲಿ: ಅಕ್ಟೋಬರ್  ೧೪, ೨೦೨೧ “ಹಸಿವಿನ ಅಳತೆಯಲ್ಲಿ ಕೇವಲ ೧೫ ದೇಶಗಳು  ಭಾರತಕ್ಕಿ೦ತ ಕೆಟ್ಟದಾಗಿವೆ.” ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index)  ಒಟ್ಟು ೧೧೬ ದೇಶಗಳಲ್ಲಿ ಭಾರತವನ್ನು  ೧೦೧ ನೇ ಸ್ಥಾನದಲ್ಲಿಟ್ಟಿದೆ. ‘ಹಸಿವು ಗಂಭೀರ’ ಎಂದು ಗುರುತಿಸಲಾಗಿರುವ  ೩೧ ದೇಶಗಳಲ್ಲಿ ಭಾರತವೂ ಸೇರಿದೆ. ಕಳೆದ ವರ್ಷ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ ದಲ್ಲಿ ೧೦೭ ದೇಶಗಳ ಪೈಕಿ ಭಾರತ ೯೪ನೇ ಸ್ಥಾನದಲ್ಲಿದೆ. ಕೇವಲ ೧೫ ದೇಶಗಳು ಭಾರತಕ್ಕಿಂತ ಕೆಟ್ಟದಾಗಿದೆ. ಇವುಗಳಲ್ಲಿ ಪಪುವಾ ನ್ಯೂಗಿನಿ (೧೦೨), ಅಫ್ಘಾನಿಸ್ತಾನ (೧೦೩), ನೈಜೀರಿಯಾ (೧೦೩), ಕಾಂಗೋ(೧೦೫), ಮೊಜಾಂಬಿಕ್ (೧೦೬), ಸಿಯೆರಾ ಲಿಯೋನ್ (೧೦೬), ಟಿಮೋರ್-ಲೆಸ್ಟೆ (೧೦೮), ಹೈಟಿ (೧೦೯), ಲೈಬೀರಿಯಾ (೧೧೦), ಮಡಗಾಸ್ಕರ್ (೧೧೧), ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (೧೧೨), ಚಾಡ್ (೧೧೩), ಮಧ್ಯ ಆಫ್ರಿಕನ್ ಗಣರಾಜ್ಯ (೧೧೪), ಯೆಮೆನ್ (೧೧೫) ಮತ್ತು ಸೊಮಾಲಿಯಾ (೧೧೬). ಭಾರತವು ಬಹುತೇಕ ನೆರೆಯ ರಾಷ್ಟ್ರಗಳ ಹಿಂದೆ ಇದೆ. ಪಾಕಿಸ್ತಾನವು 92 ನೇ ಸ್ಥಾನದಲ್ಲಿದೆ, ನೇಪಾಳ 76 ನೇ ಸ್ಥಾನದಲ್ಲಿದೆ ಮತ್ತು ಬಾಂಗ್ಲಾದೇಶ ಕೂಡ 76 ನೇ ಸ್ಥಾನದಲ್ಲಿದೆ. ಜಾಗತಿಕ ಹಸಿವಿನ ಸೂಚ್ಯಂಕ  ಆಧಾರಿತ ಪ್ರಸ್ತುತ ಪ್ರಕ್ಷೇಪಣಗಳು ಇಡೀ ವಿಶ್ವವು  ಮತ್ತು
ಇಮೇಜ್
  ಪ್ರಚಾರವೆ೦ಬ ಅಪಚಾರ ಪ್ರಚಾರದ ಪರಿಚಯ "ನಮ್ಮ ಸಮಾಜದ ಉಸ್ತುವಾರಿ ಹೊಂದಿರುವವರು - ರಾಜಕಾರಣಿಗಳು, ಕಾರ್ಪೊರೇಟ್ ಕಾರ್ಯನಿರ್ವಾಹಕರು,  ಮತ್ತು ಪತ್ರಿಕಾ ಮತ್ತು ದೂರದರ್ಶನದ ಮಾಲೀಕರು - ನಮ್ಮ ಆಲೋಚನೆಗಳು ಮತ್ತು   ಕಲ್ಪನೆಗಳ  ಮೇಲೆ ಪ್ರಾಬಲ್ಯ ಸಾಧಿಸಿದರೆ, ಬೀದಿಗಳಲ್ಲಿ ಗಸ್ತು ತಿರುಗುತ್ತಿರುವ ಸೈನಿಕರ ಅಗತ್ಯವಿಲ್ಲದೆ ಅವರು ತಮ್ಮ  ಪ್ರಭುತ್ವದಲ್ಲಿ ಸುರಕ್ಷಿತವಾಗಿರುತ್ತಾರೆ - (ಏಕ೦ದರೆ)  ಸಾರ್ವಜನಿಕರಾದ ನಾವು ನಮ್ಮನ್ನು ನಿಯಂತ್ರಿಸಿಕೊಳ್ಳುತ್ತೇವೆ. ” - ಹವರ್ಡ್ ಝಿನ್, ಅಮೆರಿಕನ್ ಇತಿಹಾಸಕಾರ. ಈ ದಿನ ಮತ್ತು ಯುಗದಲ್ಲಿ ನಾವು ಅಪಾರ ಪ್ರಮಾಣದ ಪ್ರಚಾರಕ್ಕೆ ಒಳಗಾಗುತ್ತೇವೆ.   ಸಣ್ಣ ಸಂಖ್ಯೆಯ ಕೆಲವು ಹಿತಾಸಕ್ತಿಗಳನ್ನು ಮಾತ್ರ ಬಲಪಡಿಸುವ ರೀತಿಯಲ್ಲಿ  ಜನರು  ಯೋಚಿಸಲು ಮತ್ತು ವರ್ತಿಸಲು ಕುಶಲತೆಯಿಂದ ಪ್ರಚಾರವನ್ನು ಬಳಸಲಾಗುತ್ತಿದೆ. ಪ್ರಚಾರವನ್ನು ಪರೀಕ್ಷಿಸುವುದು ಮತ್ತು ಮಾಹಿತಿಯನ್ನು ಸಂವಹನ ಮಾಡುವುದರ ಉದ್ದೇಶ , ಇದು ಪ್ರಚಾರದ ಅಪಾಯಕಾರಿ ಪರಿಣಾಮಗಳ ವಿರುದ್ಧ ವ್ಯ ಕ್ತಿಗಳು ತಮ್ಮನ್ನು ತಾವು ಸನ್ನಾಹಗೊಳಿಸಲು ಸಹಾಯ ಮಾಡುತ್ತದೆ.  ಪ್ರಚಾರ, ಮೂರು ಸಾಮಾನ್ಯ ಗುಣಲಕ್ಷಣಗಳನ್ನು ಪ್ರದರ್ಶಿಸುವ ಒಂದು ರೀತಿಯ ಮನವೊಲಿಸುವ ತಂತ್ರ ಎಂದು ವ್ಯಾಖ್ಯಾನಿಸಬಹುದು: ಮೊದಲನೆಯದಾಗಿ , ಯಾವುದೊ೦ದು  ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ  ಎಂದು ಪ್ರಚಾರಕರು ನಂಬಿರುವ ಕೆಲವು ಆಲೋಚನೆಗಳು ಮತ್ತು ನಡವಳಿಕೆಗಳನ್ನು ಜನಸಾಮಾನ್ಯರು  ಅಳವಡ