ಪೋಸ್ಟ್‌ಗಳು

HUMAN RIGHTS ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
ಇಮೇಜ್
  ಭಾರತವು 2022 ರಲ್ಲಿ ಕಾರ್ಯಕರ್ತರು, ಮಾಧ್ಯಮಗಳ ಮೇಲೆ ದಬ್ಬಾಳಿಕೆಯನ್ನು ತೀವ್ರಗೊಳಿಸಿತು: ಮಾನವತಾ ಹಕ್ಕುಗಳ ಕಾವಲು ಸ೦ಸ್ಥೆ Human Rights Watch (HRW) - ಹ್ಯೂಮನ್ ರೈಟ್ಸ್ ವಾಚ್ ವರದಿ ಭಾರತದಾದ್ಯಂತ ಅಧಿಕಾರಿಗಳು ಕಾರ್ಯಕರ್ತರು, ಪತ್ರಕರ್ತರು ಮತ್ತು ಸರ್ಕಾರದ ಇತರ ಟೀಕಾಕಾರರನ್ನು ಭಯೋತ್ಪಾದನೆ ಸೇರಿದಂತೆ "ರಾಜಕೀಯ ಪ್ರೇರಿತ" ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ.  ಜನವರಿ 12, 2023     ‘ದಿ ಹಿ೦ದು’   ದಿನಪತ್ರಿಕೆಯ ವರದಿ   ಬುಲ್ಡೋಜರ್ ಉತ್ತರ ಪ್ರದೇಶದ ಅಧಿಕಾರಿಗಳು ಗಲಭೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪ್ರಯಾಗ ರಾಜ್ ನಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಿದರು. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. | ಫೋಟೋ ಕ್ರೆಡಿಟ್: ರಾಯಿಟರ್ಸ್  ಹ್ಯೂಮನ್ ರೈಟ್ಸ್ ವಾಚ್‌ನ ‘ವರ್ಲ್ಡ್ ರಿಪೋರ್ಟ್ 2023 ’  (ಜಾಗತಿಕ ವರದಿ ೨೦೨೩)  ಭಾರತೀಯ ಅಧಿಕಾರಿಗಳು 2022 ರ ವೇಳೆಗೆ ಕಾರ್ಯಕರ್ತರ ಗುಂಪುಗಳು ಮತ್ತು ಮಾಧ್ಯಮಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು "ತೀವ್ರಗೊಳಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ" ಎಂದು ಹೇಳಿದರು. "ಹಿಂದೂ ರಾಷ್ಟ್ರೀಯತಾವಾದಿ" ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು “ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರನ್ನು ನಿಗ್ರಹಿಸುವ ನಿಂದನಾತ್ಮಕ...
ಇಮೇಜ್
  ಜಗತ್ತಿನ ದೇಶಗಳಾದ್ಯಂತ ಮಾನವ ಸ್ವಾತಂತ್ರ್ಯದ ಅಂತರರಾಷ್ಟ್ರೀಯ ಅಧ್ಯಯನದಲ್ಲಿ ೧೬೫ ದೇಶಗಳಲ್ಲಿ ಭಾರತ ಗಣನೀಯವಾಗಿ ಕುಸಿದಿದೆ ಕೆನಡಾದ 'ಫ್ರೇಸರ್ ಇನ್ಸ್ಟಿಟ್ಯೂಟ್' ಜೊತೆಗೆ ಅಮೆರಿಕ ದೇಶದ  'ಕ್ಯಾಟೊ ಇನ್ಸ್ಟಿಟ್ಯೂಟ್' ವೈಯಕ್ತಿಕ, ನಾಗರಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒಳಗೊಂಡಿರುವ ವಿಶಾಲ ಅಳತೆಯ ಆಧಾರದ ಮೇಲೆ ವಿಶ್ವದ ಮಾನವ ಸ್ವಾತಂತ್ರ್ಯದ ಸ್ಥಿತಿ ಯ ಅಧ್ಯಯನವನ್ನು ನಡೆಸುತ್ತಿದೆ. ಮಾನವ ಸ್ವಾತಂತ್ರ್ಯ ವು ವ್ಯಕ್ತಿಗಳ ಘನತೆಯನ್ನು ಗುರುತಿಸುವ ಸಾಮಾಜಿಕ ಪರಿಕಲ್ಪನೆಯಾಗಿದೆ.  ಈ ಅಧ್ಯಯನದಲ್ಲಿ ಮಾನವ ಸ್ವಾತಂತ್ರ್ಯವನ್ನು ನಕಾರಾತ್ಮಕ ಸ್ವಾತಂತ್ರ್ಯ ಅಥವಾ ಬಲವಂತದ ನಿರ್ಬಂಧದ ಅನುಪಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರ್ಯವು ಅಂತರ್ಗತವಾಗಿ ಮೌಲ್ಯಯುತವಾಗಿದೆ ಮತ್ತು ಮಾನವ ಪ್ರಗತಿಯಲ್ಲಿ ಪಾತ್ರವನ್ನು ವಹಿಸುತ್ತದೆಯಾದ್ದರಿಂದ, ಅದನ್ನು ಎಚ್ಚರಿಕೆಯಿಂದ ಅಳೆಯಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ.  ೨೦೦೮ ರಿಂದ ೨೦೧೯ ರವರೆಗೆ ದೇಶಗಳ ಶ್ರೇಣಿಯನ್ನು ನಿರ್ಧರಿಸಲು ವಾರ್ಷಿಕ ಮಾನವ ಸ್ವಾತಂತ್ರ್ಯ ಸೂಚ್ಯಂಕವು  ೮೨ ಸೂಚಕಗಳನ್ನು ಬಳಸಿದೆ. ಸೂಚ್ಯಂಕದಲ್ಲಿ ಭಾರತವು ೧೬೫ ದೇಶಗಳಲ್ಲಿ ೧೧೯ ನೇ ಸ್ಥಾನದಲ್ಲಿದೆ. ೨೦೧೩ಮತ್ತು ೨೦೧೯ ರ ನಡುವೆ ಆರ್ಥಿಕ, ವೈಯಕ್ತಿಕ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿವಿಧ ಸೂಚಕಗಳಲ್ಲಿ ಭಾರತದ ಕಾರ್ಯಕ್ಷಮತೆಯು ನಿರಂತರ ಕುಸಿತದಲ್ಲಿದೆ. ಡಿಸೆಂಬರ್ ೨೦೨೧ ರಲ್ಲಿ ಬಿಡು...
ಇಮೇಜ್
  2014 ರಿಂದಲೂ ಜಾರಿಬೀಳುತ್ತಿದೆ   ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 165 ರಾಷ್ಟ್ರಗಳಲ್ಲಿ ಭಾರತವು 119 ನೇ ಸ್ಥಾನದಲ್ಲಿದೆ, ಅಮೆರಿಕ ಮತ್ತು ಕೆನಡಾ ದೇಶಗಳಲಿರುವ ಎರಡು ‘ಥಿಂಕ್ ಟ್ಯಾಂಕ್‌’ಗಳ (ವೈಚಾರಿಕ ಸ೦ಸ್ಠೆಗಳ) ವರದಿ ಅಮೆರಿಕಾದ ಕ್ಯಾಟೊ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫ್ರೇಸರ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಮಾನವ ಸ್ವಾತಂತ್ರ್ಯ ಸೂಚ್ಯಂಕ, 2008 ರಿಂದ 2019 ರವರೆಗೆ ದೇಶಗಳನ್ನು ಅಳತೆ ಮಾಡಲು 82 ಸೂಚಕಗಳನ್ನು ಬಳಸಿದೆ. NIKHIL RAMPAL 18 ಡಿಸೆಂಬರ್, 2021 ದಿ  ಪ್ರಿಂಟ್ ಹೊಸದಿಲ್ಲಿ: ಆರ್ಥಿಕ, ವೈಯಕ್ತಿಕ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿವಿಧ ಸೂಚಕಗಳಲ್ಲಿ ಭಾರತದ ಸಾಧನೆಯು 2013 ಮತ್ತು 2019 ರ ನಡುವೆ ನಿರಂತರ ಕುಸಿತದಲ್ಲಿದೆ ಎಂದು ಗುರುವಾರ 16-12-2021 ರ೦ದು ಬಿಡುಗಡೆ ಮಾಡಿದ ಈ ವರ್ಷದ ಮಾನವ ಸ್ವಾತಂತ್ರ್ಯ ಸೂಚ್ಯಂಕ  ವರದಿಯು ಹೇಳಿದೆ. 2019 ರ ವಿವರಗಳ  ಆಧಾರದ ಮೇಲೆ, ಭಾರತವು 165 ದೇಶಗಳಲ್ಲಿ 119 ನೇ ಸ್ಥಾನದಲ್ಲಿದೆ. ಇದು 2013ರಲ್ಲಿ 157 ದೇಶಗಳ ಮಧ್ಯೆ  90 ನೇ ಸ್ಥಾನದಲ್ಲಿತ್ತು. 2013 ರಿಂದಈಚೆಗೆ "ವೈಯಕ್ತಿಕ ಸ್ವಾತಂತ್ರ್ಯ" ಕ್ಕಾಗಿ ಭಾರತದ ಶ್ರೇಯಾಂಕವು ಕುಸಿದಿದ್ದರೂ, ಆ ಅವಧಿಯಲ್ಲಿ "ಆರ್ಥಿಕ ಸ್ವಾತಂತ್ರ್ಯ" ದ ಮೇಲೆ ಅದರ ಕಾರ್ಯಕ್ಷಮತೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ವಿವರಗಳು  ತೋರಿಸಿವೆ. 2021 ರ ವರದಿ ಈ ಎರಡು ‘ಥಿಂಕ್ ಟ್ಯಾಂಕ್‌’ ಸ೦ಸ್ಥೆಗಳ...
ಇಮೇಜ್
  ನಾಗಾಲ್ಯಾಂಡ್ ಹತ್ಯೆಗಳು: ಭಾರತೀಯ ಸೇನೆಯ ಸೊಟ್ಟಪಟ್ಟ ದಾಳಿಯ ಬಗ್ಗೆ ಕೋಪವು ಬೆಳೆಯುತ್ತಿದೆ ನಿತಿನ್ ಶ್ರೀವಾಸ್ತವ ಬಿಬಿಸಿ ಹಿಂದಿ ಪ್ರಸಾರ ,  ಮೊನ್  ಜಿಲ್ಲೆ, ನಾಗಾಲ್ಯಾಂಡ್  ೧೪-೧೨-೨೦೨೧   ಮೊಂಗ್ಲಾಂಗ್ ಅವರ ಪತಿ ವಿವಾಹವಾದ ಕೆಲವೇ ದಿನಗಳಲ್ಲಿ ಕೊಲ್ಲಲ್ಪಟ್ಟರು   ಭಾರತದ ಈಶಾನ್ಯ ಭಾಗದ ನಾಗಾಲ್ಯಾಂಡ್ ರಾಜ್ಯ.  ಹಳ್ಳಿಯೊಂದರಲ್ಲಿ ಹುಲ್ಲಿನ ಗುಡಿಸಲಿನ ಹೊರಗೆ ಮಹಿಳೆಯರ ಗುಂಪು ಖಿನ್ನವಾಗಿ ಮತ್ತು ಮೌನವಾಗಿ ಕುಳಿತುಕೊಂಡಿದೆ. ಅವರೊಳಗೆ 10 ದಿನಗಳ ಹಿಂದೆಯಷ್ಟೇ ವಿವಾಹವಾದ ೨೫ ವಯಸ್ಸಿನ ಯುವತಿಯೊಬ್ಬಳು ಗದ್ಗದಿತಳಾಗಿ ಕೇಳುತ್ತಾಳೆ: "ಈಗ ನನ್ನನ್ನು ಯಾರು ನೋಡಿಕೊಳ್ಳುತ್ತಾರೆ?"     ಮೊಂಗ್‌ಲಾಂಗ್‌ಳ  ಪತಿ ಹೊಕುಪ್ ಕೊನ್ಯಾಕ್ ಕೂಡ ಈ ತಿಂಗಳ ಆರಂಭದಲ್ಲಿ ಮ್ಯಾನ್ಮಾರ್‌ ಗಡಿಯ ಸಮೀಪದಲ್ಲಿರುವ ಮೋನ್‌ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕೆಲಸದಿಂದ ಹಿಂದಿರುಗುತ್ತಿದ್ದ  ಕಲ್ಲಿದ್ದಲು ಗಣಿ ಕಾರ್ಮಿಕರ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಹತ್ಯೆಗೀಡಾದ ಆರು ಪುರುಷರಲ್ಲಿ ಸೇರಿದ್ದನು.   ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಕೋಪಗೊಂಡ ಪ್ರತಿಭಟನಾಕಾರರ ಮೇಲೆ ಪಡೆಗಳು ಗುಂಡು ಹಾರಿಸಿದ ನಂತರ ಇನ್ನೂ ಎಂಟು ನಾಗರಿಕರು ಸಾವನ್ನಪ್ಪಿದರು. ಈ ಘರ್ಷಣೆಯಲ್ಲಿ ಓರ್ವ ಯೋಧ ಕೂಡ ಸಾವನ್ನಪ್ಪಿದ್ದಾರೆ.   ಸ್ಥಳೀಯ ಉಗ್ರಗಾಮಿ ಗುಂಪುಗಳ ನೇತೃತ್ವದ ದಂಗೆಯಿಂದ ದೀರ್ಘಕಾ...
ಇಮೇಜ್
  ಭಾರತದ ನಾಗರಿಕರಿಗೆ ಮುಕ್ತ ಪತ್ರ ನಾಗರಿಕ ಸಮಾಜ: ರಾಜ್ಯದ ಶತ್ರುವೇ? 28 ನವೆಂಬರ್ 2021 ಆತ್ಮೀಯ ಸಹ ನಾಗರಿಕರೇ, ನಾವು ನಮ್ಮ ವೃತ್ತಿಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ ಅಖಿಲ ಭಾರತ ಮತ್ತು ಕೇಂದ್ರ ಸೇವೆಗಳ ಮಾಜಿ ನಾಗರಿಕ ಸೇವಕರ ಗುಂಪು. ಒಂದು ಗುಂಪಿನಂತೆ, ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆದರೆ ನಿಷ್ಪಕ್ಷಪಾತತೆ, ತಟಸ್ಥತೆ ಮತ್ತು ಭಾರತದ ಸಂವಿಧಾನಕ್ಕೆ ಬದ್ಧತೆಯನ್ನು ಪಾಲಿಸುತ್ತೇವೆ. ಕಳೆದ ಕೆಲವು ವರ್ಷಗಳಿಂದ ದೇಶದ ಆಡಳಿತದ ದಿಕ್ಕಿನಲ್ಲಿ ಗೊಂದಲದ ಪ್ರವೃತ್ತಿಯನ್ನು ಗಮನಿಸಬಹುದಾಗಿದೆ. ನಾವು ಬದಲಾಯಿಸಲಾಗದವು ಎಂದು ಏನನ್ನು ಸ್ವೀಕರಿಸಿಕೊಂಡಿದ್ದೇವೋ ಆ  ನಮ್ಮ ಗಣರಾಜ್ಯದ ಮೂಲಭೂತ ಮೌಲ್ಯಗಳು ಮತ್ತು ಆಡಳಿತದ ಪಾಲಿಸಬೇಕಾದ ನಿಯಮಗಳು, ಇ೦ದು ಒ೦ದು ದುರಹಂಕಾರಿ, ಬಹುಸಂಖ್ಯಾತ ರಾಜ್ಯಾಡಳಿತದ  ನಿರಂತರ ಆಕ್ರಮಣಕ್ಕೆ ಒಳಗಾಗಿವೆ. ಜಾತ್ಯತೀತತೆ ಮತ್ತು ಮಾನವ ಹಕ್ಕುಗಳ ಪವಿತ್ರ ತತ್ವಗಳು ಅವಹೇಳನಕಾರಿ ವ್ಯತಿರಿಕ್ತ ಅರ್ಥವನ್ನು ಪಡೆದುಕೊಂಡಿವೆ. ಈ ತತ್ವಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ನಾಗರಿಕ ಸಮಾಜದ ಕಾರ್ಯಕರ್ತರು ನಮ್ಮ ಶಾಸನ ಪುಸ್ತಕವನ್ನು ಕಲ೦ಕಗೊಳಿಸುವ ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲು ಮತ್ತು ಅನಿರ್ದಿಷ್ಟಕಾಲ ಸೆರೆಹಿಡಿಯುವುದಕ್ಕೆ ಒಳಗಾಗುತ್ತಾರೆ. ಅವರನ್ನು ರಾಷ್ಟ್ರವಿರೋಧಿ ಮತ್ತು ವಿದೇಶಿ ಏಜೆಂಟ್‌ಗಳೆಂದು ಅಪಖ್ಯಾತಿಗೊಳಿಸಲು ಆಡಳಿ...