ಪೋಸ್ಟ್‌ಗಳು

  ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ  ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ:   ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ ಸಂಪಾದಕೀಯ ನರೇಂದ್ರ ಮೋದಿಯವರಿಗೆ ಮತ್ತೊಂದು ಜನಾದೇಶ ನೀಡುವ ಬಗ್ಗೆ ಭಾರತೀಯ ಮತದಾರರು ತೀವ್ರವಾಗಿ ಯೋಚಿಸಬೇಕು ಬುಧವಾರ 17 ಏಪ್ರಿಲ್ 2024 ದೇಶವನ್ನು ಮುನ್ನಡೆಸುವ ಪೈಪೋಟಿಯನ್ನು  ಈಗಾಗಲೇ ಗೆದ್ದಿರುವ ಬಡಾಯಿಯ ನಡುವೆ ವಿಶ್ವದ ಅತಿದೊಡ್ಡ ಚುನಾವಣೆಗಳು ಭಾರತದಲ್ಲಿ ಈ ವಾರ  ಪ್ರಾರಂಭವಾಗಿವೆ.  ನರೇಂದ್ರ ಮೋದಿಯವರು ದೊಡ್ಡ ಸಂಸದೀಯ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಅವರ ಸಾಧನೆಯು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ  ಸಾಧನೆಯನ್ನು ಸರಿಗಟ್ಟುತ್ತದೆ.  ಚುನಾವಣಾ ಫಲಿತಾಂಶ ಏನೇ ಇರಲಿ,  ಭಾರತೀಯ ಪ್ರಜಾಪ್ರಭುತ್ವ ಸೋಲುವದ೦ತೂ ಖಚಿತ.  ಯಾಕೆ ? ಶ್ರೀ ನೆಹರೂ ಅನಾಮಧೇಯವಾಗಿ ತಮ್ಮದೇ ನಾಯಕತ್ವವನ್ನು ತಾವೇ ಟೀಕಿಸಿ ದ್ದರೆ, ಅವರಿಗೆ ಭಿನ್ನವಾಗಿ ಶ್ರೀ ಮೋದಿಯವರು ತಮ್ಮ ವಿರೋಧಿಗಳನ್ನು ಅಸಡ್ಡೆಯಿ೦ದ ಕಾಣುತ್ತಾರೆ. ದೈನಂದಿನ ಆಡಳಿತದಲ್ಲಿ ವಿಚಾರಗಳ ಸ್ಪರ್ಧೆಗೆ ಅವಕಾಶ ನೀಡುವದಲ್ಲದೆ   ನಾಗರಿಕರನ್ನು ಸಮಾನವಾಗಿ ಪರಿಗಣಿಸಿದಾಗ ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೋದಿಯವರ ಭಾರತದಲ್ಲಿ ಇವುಗಳ ಕೊರತೆಯಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ತನ್ನ ಬ್ಯ
  ಉದಾರವಾದಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುವವರಿಗೆ ೨೦೨೪ರ ವರ್ಷ  ಕಳವಳವನ್ನುಂಟು ಮಾಡುತ್ತದೆ. ಸಿದ್ಧಾಂತದಲ್ಲಿ ಇದು ಪ್ರಜಾಪ್ರಭುತ್ವದ ವಿಜಯದ ವರ್ಷವಾಗಿರಬೇಕು. ಪ್ರಾಯೋಗಿಕವಾಗಿ ಇದು ಅದರ ವಿರುದ್ಧವಾಗಿರುತ್ತದೆ. ಜಗತ್ತಿನ ಅರ್ಧಕ್ಕಿ೦ತ ಹೆಚ್ಚು ಜನರು ೨೦೨೪ ರಲ್ಲಿ ರಾಷ್ಟ್ರವ್ಯಾಪಿ ಚುನಾವಣೆಗಳನ್ನು ನಡೆಸುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.ಈ ಮೈಲಿಗಲ್ಲನ್ನು ತಲುಪಿರುವುದು ಇದೇ ಮೊದಲು .ಮತದಾರರ ಮತದಾನದ ಇತ್ತೀಚಿನ ಮಾದರಿಗಳನ್ನು ಆಧರಿಸಿ, ೭೦ ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು ೨ ಶತಕೋಟಿ ಜನರು ಮತದಾನಕ್ಕೆ ಹೋಗುತ್ತಾರೆ ಎ೦ದು ಲೆಕ್ಕ ಮಾಡಬಹುದು.  ಬ್ರಿಟನ್‌ನಿಂದ ಬಾಂಗ್ಲಾದೇಶ, ಭಾರತದಿಂದ ಇಂಡೋನೇಷ್ಯಾದ ವರೆಗೂ ಮತದಾನ ನಡೆಯಲಿದೆ. ಹೀಗಾಗಿ ಇದು ಪ್ರಜಾಪ್ರಭುತ್ವದ ವಿಜಯೋತ್ಸವದ ವರ್ಷ ಎಂದು ತೋರಬಹುದು.  ಆದರೆ ನಿಜಕ್ಕೂ  ಅದು ವಿರುದ್ಧವಾಗಿರುತ್ತದೆ. ಅನೇಕ ಚುನಾವಣೆಗಳು ಉದಾರ ನೀತಿಗಳು ಮತ್ತು ಆಚರಣೆಗಳಿಗೆ ವಿರುದ್ಧವಾಗಿರುವ  ಆಡಳಿತಗಾರರನ್ನು ಭದ್ರಪಡಿಸುತ್ತವೆ. ಇತರ ಅನೇಕ ಚುನಾವಣೆಗಳು ಭ್ರಷ್ಟರು ಮತ್ತು  ಅಯೋಗ್ಯರನ್ನು ಪುರಸ್ಕರಿಸುತ್ತವೆ. ಅತ್ಯಂತ ಪ್ರಮುಖ ಸ್ಪರ್ಧೆಯಾದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ತುಂಬಾ ವಿಷಪೂರಿತ ಮತ್ತು ಧ್ರುವೀಕರಣವಾಗಿದ್ದು ಅದು ಜಾಗತಿಕ ರಾಜಕೀಯದ ಮೇಲೆ  ವಿಷಣ್ಣತೆಯನ್ನು  ಹೂಡುತ್ತದೆ. ಉಕ್ರೇನ್‌ನಿಂದ ಮಧ್ಯಪ್ರಾಚ್ಯದವರೆಗೆ ನಡೆಯುತ್ತಿರುವ ಸಂಘರ್ಷಗಳ  ಹಿನ್ನೆಲೆಯಲ್ ಲಿಅಮೆರಿಕ ಭವಿಷ
ಇಮೇಜ್
  ಹೆನ್ರಿ ಕಿಸ್ಸಿಂಜರ್, ಲಕ್ಷಗಟ್ಟಲೆ ಸಾವುಗಳಿಗೆ ಜವಾಬ್ದಾರರಾಗಿರುವ US ರಾಜತಾಂತ್ರಿಕ, 100 ನೇ ವಯಸ್ಸಿನಲ್ಲಿ ನಿಧನರಾದರು " ಹೆನ್ರಿ ಕಿಸ್ಸಿಂಜರ್ ಅವರಂತೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹೆಚ್ಚು ಸಾವು, ವಿನಾಶ ಮತ್ತು ಮಾನವ ಸಂಕಟಗಳಿಗೆ ಜವಾಬುದಾರರು ಬೇರೆ ಯಾರೂ ಇಲ್ಲ." ನಿಕ್ ಟರ್ಸ್   ಲೇಖನ ನವೆಂಬರ್ 29 2023, 9:49 p.m.  ಅಮೆರಿಕಾದ ಇಬ್ಬರು ರಾಷ್ಟ್ರಧ್ಯಕ್ಷರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಕಾರ್ಯದರ್ಶಿ ಮತ್ತು ದೀರ್ಘಾವಧಿಯ  ಅಮೆರಿಕಾದ ವಿದೇಶಾಂಗ ನೀತಿ ಸ್ಥಾಪನೆಯಲ್ಲಿ   ಅಧಿಕೃತವಾಗಿ ಹಾಗೆಯೇ ಪರದೆಯ ಹಿಂದೆ  ಕಾರ್ಯ ಮಾಡಿದ ಹೆನ್ರಿ ಕಿಸಿಂಜರ್, ೨೦೨೩ ನವೆಂಬರ್ ೨೯ ರಂದು ನಿಧನರಾದರು. ಅವರು ೧೦೦  ವರ್ಷ ವಯಸ್ಸಿನವರಾಗಿದ್ದರು. ಕಿಸ್ಸಿಂಜರ್ ವಿಯೆಟ್ನಾಂ ಯುದ್ಧವನ್ನು ವಿಸ್ತರಿಸಲು ಮತ್ತು ಆ ಸಂಘರ್ಷವನ್ನು ತಟಸ್ಥ ಕಾಂಬೋಡಿಯಾಕ್ಕೆ ವಿಸ್ತರಿಸಲು ಸಹಾಯ ಮಾಡಿದರು; ಕಾಂಬೋಡಿಯಾ, ಪೂರ್ವ ಟಿಮೋರ್ ಮತ್ತು ಬಾಂಗ್ಲಾದೇಶದಲ್ಲಿ ನರಮೇಧಗಳನ್ನು ಸುಗಮಗೊಳಿಸಿದರು; ದಕ್ಷಿಣ ಆಫ್ರಿಕಾದಲ್ಲಿ  ಅಂತರ್ಯುದ್ಧಗಳನ್ನು ವೇಗಗೊಳಿಸಿದರು ಮತ್ತು ದಕ್ಷಿಣ  ಅಮೆರಿಕದಾದ್ಯಂತ ದಂಗೆಗಳು ಮತ್ತು ಕೊಲೆಗಾರ ತಂಡಗಳನ್ನು ಬೆಂಬಲಿಸಿದರು . ಅವರ ಜೀವನಚರಿತ್ರೆಕಾರ ಗ್ರೆಗ್ ಗ್ರ್ಯಾಂಡಿನ್ ಪ್ರಕಾರ, ಕಿಸ್ಸಿ೦ಜರ್ ಅವರ ಕೈಗಳ ಮೇಲೆ  ಕನಿಷ್ಠ 3೦ ಲಕ್ಷ  ಜನರ ರಕ್ತವಿತ್ತು. "ಹೆನ್ರಿ ಕಿಸ್ಸಿಂಜರ್‌ನಂತೆ ಪ್ರಪಂಚದಾದ್ಯ
ಇಮೇಜ್
  ‘ಇದು ಭಾರತದ ಅತ್ಯಂತ ಒತ್ತಡದ ನಗರ’: ಕೋಚಿಂಗ್ ರಾಜಧಾನಿ ಕೋಟಾದ ಕರಾಳ ಮುಖ ಆತ್ಮಹತ್ಯೆಗಳು ಪ್ರವೇಶ ಪರೀಕ್ಷೆಗಳಿಗೆ ನೂಕುನುಗ್ಗಲು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆ ಹೇರುವ ಕಠೋರ ಸಂಸ್ಕೃತಿಯ ಮೇಲೆ ಗಮನ ಸೆಳೆಯುತ್ತವೆ ಹನ್ನಾ ಎಲ್ಲಿಸ್-ಪೀಟರ್ಸನ್ ಮತ್ತು ಶೇಖ್ ಅಜೀಜುರ್ ರೆಹಮಾನ್ ಕೋಟಾದಲ್ಲಿ ಸೋಮ 9 ಅಕ್ಟೋಬರ್ 2023  ಲ೦ಡನ್ನಿನ ‘ದಿ ಗಾರ್ಡಿಯನ್’ ದಿನಪತ್ರಿಕೆ.  ಪ್ರತಿ ವರ್ಷ ಕೋಟಾಕ್ಕೆ ಬ೦ದು ಸೇರುವ 300,000 ವಿದ್ಯಾರ್ಥಿಗಳ ಮಟ್ಟಿಗೆ, ಭಾರತದ ರಾಜಸ್ಥಾನದ ಈ ಬಿಸಿ, ಧೂಳಿನ ನಗರವು ಅಧ್ಯಯನಸಾಧನೆಯ ಪ್ರದರ್ಶನದ  ‘ಪ್ರೆಷರ್  ಕುಕ್ಕರ್ ’ ಆಗಿದೆ. ಅಲ್ಲಿ ದಿನಕ್ಕೆ 18 ಗಂಟೆಗಳ ಅಧ್ಯಯನವು ಸಾಮಾನ್ಯವಾಗಿದೆ . ಇಲ್ಲಿ   ಪರೀಕ್ಷೆಯ ಅಂಕಗಳು ಮಾತ್ರ ಗಣನಾರ್ಹ . ಕೆಲವರು ಭಾರತದ ಮುಂದಿನ ಪೀಳಿಗೆಯ ವೈದ್ಯರು ಮತ್ತು ಇಂಜಿನಿಯರ್‌ಗಳಾಗುತ್ತಾರೆ; ಆದರೆ ಇತರರಿಗೆ, ದುರದೃಷ್ಟದಿಂದ ಈ  ಅನುಭವ ಅವರನ್ನು ಮುರಿಯುತ್ತದೆ. ಕೋಟಾ ಇತ್ತೀಚಿನ ದಶಕಗಳಲ್ಲಿ ಭಾರತದ "ಕೋಚಿಂಗ್ ಕ್ಯಾಪಿಟಲ್" ಎಂದು ಹೆಸರುವಾಸಿಯಾಗಿದೆ, ಅಲ್ಲಿ ಸುಮಾರು ಒಂದು ಡಜನ್ ತಜ್ಞ ಸಂಸ್ಥೆಗಳು ವೈದ್ಯಕೀಯ  ಶಾಸ್ತ್ರ  ಅಥವಾ ಇಂಜಿನಿಯರಿಂಗ್ ಕಾಲೇಜಿಗೆ  ಪ್ರವೇಶಕ್ಕೆ ಅತ್ಯ೦ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತೀವ್ರವಾದ ಅಧ್ಯಯನ ನೀಡುತ್ತಿವೆ. 1.4 ಶತಕೋಟಿ ಜನರಿರುವ ಭಾರತದ ಜನಸಂಖ್ಯೆಯ 65%  ಜನರು 35 ವರ್ಷಕ್ಕಿಂತ ಕಡಿಮೆ ವ
ಇಮೇಜ್
  ೪೮ ಪುಟಗಳ  ಮಕ್ಕಳ ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’   ಅ೦ದವಾದ ೪೮ ಪುಟಗಳ  ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’. ಇದರ ಕೆಲವು ಪ್ರತಿಗಳು ಲಭ್ಯವಿವೆ. ಇವನ್ನು ಉಚಿತವಾಗಿ ‘ಮೊದಲು ಬ೦ದವರಿಗೆ ಮೊದಲ ಸೇವೆ’ (First Come, First Served) ತತ್ವದ ಮೇರೆಗೆ ಅ೦ಚೆಯ ಮೂಲಕ ಕಳುಹಿಸಲಾಗುವದು.  ನನ್ನ ಓದುಗರಲ್ಲಿ ಆಸಕ್ತಿ ಇರುವವರು ಕೆಳಗೆ ಅಥವಾ ನನ್ನ ಇ-ಮೇಲ್ ವಿಳಾಸಕ್ಕೆ ( sunder_t@yahoo.com ) ತಮ್ಮ ಹೆಸರು, ವಿಳಾಸ, ದೂರವಾಣಿ ಸ೦ಖ್ಯೆಗಳೊ೦ದಿಗೆ ದಯ ಮಾಡಿ ಬರೆಯಿರಿ. 
   ಮೋದಿ ನೇತೃತ್ವದಲ್ಲಿ ‘ಒಂದೇ ರಾಷ್ಟ್ರ’ “ನರೇಂದ್ರ ಮೋದಿಯವರು ಭಾರತದ ಉಗ್ರ ಪ್ರಾದೇಶಿಕ ವಿಭಜನೆಗಳನ್ನು ವಿಸ್ತರಿಸುತ್ತಿದ್ದಾರೆ ದಕ್ಷಿಣದ ರಾಜ್ಯಗಳು ಹೆಚ್ಚು ತುಳಿತಕ್ಕೊಳಗಾಗುತ್ತಿವೆ” - ದಿ ಇಕಾನಮಿಸ್ಟ್ . ಲ೦ಡನ್ನಿನಿ೦ದ ಪ್ರಕಟವಾಗುವ ‘ದಿ ಇಕಾನಮಿಸ್ಟ್’ ವಾರಿಕೆ ಬಹಳ ಪ್ರಸಿಧ್ಧ ಪತ್ರಿಕೆ.   13 ಸೆಪ್ಟೆ೦ಬರಿನ (2023)ರ ದಿನಾ೦ಕದ ವರದಿಯಲ್ಲಿ  ‘ದಿ ಇಕಾನಮಿಸ್ಟ್’  ಪತ್ರಿಕೆ ‘ಮೋದಿ ನೇತೃತ್ವದಲ್ಲಿ ಒಂದೇ ರಾಷ್ಟ್ರ’  ಎನ್ನುವ ಶೀರ್ಷಕದಡಿಯಲ್ಲಿ ಭಾರತದಲ್ಲಿ ಬೆಳೆಯುತ್ತಿರುವ ಉತ್ತರ - ದಕ್ಷಿಣ ವ್ಯತ್ಯಾಸಗಳ ಬಗ್ಗೆ ಚರ್ಚಿಸಿದೆ. ನರೇಂದ್ರ ಮೋದಿಯವರು ಭಾರತದ ಉಗ್ರ ಪ್ರಾದೇಶಿಕ ವಿಭಜನೆಗಳನ್ನು ವಿಸ್ತರಿಸುತ್ತಿದ್ದಾರೆ ಎ೦ದೂ, ದಕ್ಷಿಣದ ರಾಜ್ಯಗಳು ಹೆಚ್ಚು ತುಳಿತಕ್ಕೊಳಗಾಗುತ್ತಿವೆ ಎ೦ದೂ ಲೇಖನದಲ್ಲಿ ಸೂಚಿಸಲಾಗಿದೆ.‘ದಿ ಇಕಾನಮಿಸ್ಟ್’ ಪ್ರಕಾರ    ವಿಶಾಲ ಮತ್ತು ವೈವಿಧ್ಯಮಯ ಭಾರತ ದೇಶವನ್ನು ಕೇಂದ್ರೀಕರಿಸಲು ಮತ್ತು ಏಕರೂಪಗೊಳಿಸುವ  ತಮ್ಮ ಇರಾದೆಯನ್ನು ಮೋದಿ ಪ್ರಾರ೦ಭದಿ೦ದಲೂ  ಸ್ಪಷ್ಟಪಡಿಸಿದ್ದಾರೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯು ಭಾರತವನ್ನು ಯುರೋಪಿಯನ್ ರಾಷ್ಟ್ರ-ರಾ ಜ್ಯ (‘Nation-State’)ದಂತೆ ಪರಿವರ್ತಿಸಲು ಪ್ರಾರಂಭಿಸಿದೆ. ಆ ಪ್ರಯಾಸ  ಕೇಂದ್ರ ಸರ್ಕಾರವನ್ನು ಬಲಪಡಿಸುವುದು ಮತ್ತು ಭಾರತ-ಪೂರ್ಣ  ಹಿಂದೂ-ರಾಷ್ಟ್ರೀಯ ಗುರುತನ್ನು ಉತ್ತೇಜಿಸುವುದು ಎರಡನ್ನೂ ಒಳಗೊಂಡಿರುತ್ತದೆ. ಭಾರತವು "ಒಂದು ರಾ