ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ದಿ ವಯರ್ ನಲ್ಲಿ ಪ್ರಕಟಿತ  ಭಾರತದಲ್ಲಿ ಕೃಷಿಕರ ಆಂದೋಲನದಬಗ್ಗೆ ನೋಮ್ ಚೋಮ್ಸ್ಕಿ   ನಾಸಾ ವಿಜ್ಞಾನಿ ಮತ್ತು ಚಲನಚಿತ್ರ ನಿರ್ಮಾಪಕ ಬೇದಬ್ರತ ಪೇನ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರೊ. ನೋಮ್ ಚೋಮ್ಸ್ಕಿ ಅವರು ಭಾರತದಲ್ಲಿ ರೈತರ ಪ್ರತಿಭಟನೆಯನ್ನು ಚರ್ಚಿಸುತ್ತಾರೆ.. ಇದನ್ನು 'ಕರಾಳ ಕಾಲದಲ್ಲಿ ಭರವಸೆಯ ದಾರಿದೀಪ' ಎಂದು ಕರೆದ ಖ್ಯಾತ ಭಾಷಾಶಾಸ್ತ್ರಜ್ಞ, ವಿದ್ವಾಂಸ ಮತ್ತು ಕಾರ್ಯಕರ್ತ, ಭಾರತದ ರೈತರು ನಡೆಸುವ ಪ್ರದರ್ಶನಗಳು ವಿಶ್ವದಾದ್ಯಂತ 'ಹೋರಾಟದ ಮಾದರಿ' ಎಂದು ಹೇಳುತ್ತಾರೆ.   ಜೂನ್ 26, 2021  ಬೇದಬ್ರತ  ಪೇನ್: ಭಾರತೀಯ ರೈತರು ಪ್ರತಿಭಟನೆಯ ಮೂಲಕ  ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ನೀವು ಹೇಳುತ್ತೀರಾ ?  ಚೋಮ್ಸ್ಕಿ: ಖಂಡಿತ. ಇದು ಬಹಳ ಮುಖ್ಯವಾದ ಪ್ರತಿಭಟನೆಯಾಗಿದೆ ಮತ್ತು ದಬ್ಬಾಳಿಕೆ, ಹಿಂಸಾಚಾರ ಮತ್ತು ಎಲ್ಲಾ ರೀತಿಯ ಮಾಧ್ಯಮ ದಾಳಿಗಳ ನಡುವೆಯೂ ಅದನ್ನು ಮು೦ದುವರಿಸಿಕೊಳ್ಳಲು ಅವರು ಸಮರ್ಥರಾಗಿದ್ದಾರೆ ಎಂಬುದು ಅದ್ಭುತಕರವಾಗಿದೆ.  ಅವರು ಅಲ್ಲಿಯೇ ಪಟ್ಟು ಹಿಡಿದು ಮು೦ದುವರೆದು , ಅವರು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.  ಕೃಷಿ ಸಮುದಾಯದ ಹಕ್ಕುಗಳಿಗಾಗಿ ಮಾತ್ರವಲ್ಲ, ಆದರೆ ಭಾರತವು ತನ್ನ ನಾಗರಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ನೋಡಿಕೊಳ್ಳುವ ಕಾರ್ಯನಿರತ ಸಮಾಜವಾಗಿದೆ ಎನ್ನುವ ಉದ್ದೇಶದಿ೦ದ.   ಬೇದಬ್ರತ: “ಭಾರತೀಯ ಸರ್ಕಾರವು ಇಂದು ಭಾರತೀಯ ರೈತರಿಗೆ  “ ನಿಮ್ಮ ಕೃಷಿಯನ್ನು ತೆರೆಯಿರಿ
ಇಮೇಜ್
ನೋಮ್ ಚೋಮ್ಸ್ಕಿ ವಿಕಿಪೀಡಿಯಾದಿಂದ 2017 ರಲ್ಲಿ ಚೋಮ್ಸ್ಕಿ ಅವ್ರಾಮ್ ನೋಮ್ ಚೋಮ್ಸ್ಕಿ (ಜನನ ಡಿಸೆಂಬರ್ 7, 1928) ಒಬ್ಬ ಅಮೇರಿಕನ್ ಭಾಷಾಶಾಸ್ತ್ರಜ್ಞ , ದಾರ್ಶನಿಕ , ಅರಿವಿನ ವಿಜ್ಞಾನಿ , ಇತಿಹಾಸಕಾರ , ಸಾಮಾಜಿಕ ವಿಮರ್ಶಕ ಮತ್ತು ರಾಜಕೀಯ ಕಾರ್ಯಕರ್ತ . ಕೆಲವೊಮ್ಮೆ " ಆಧುನಿಕ ಭಾಷಾ ವಿಜ್ಞಾನದ ಪಿತಾಮಹ", ಎಂದು ಕರೆಯಲ್ಪಡುವ ಚಾಮ್ಸ್ಕಿ  ವಿಶ್ಲೇಷಣಾತ್ಮಕ ತತ್ವಶಾಸ್ತ್ರ ಹಾಗೂ ಅರಿವಿನ ವಿಜ್ಞಾನದ ಕ್ಷೇತ್ರದಲ್ಲಿ ಗಣನೀಯ ವಿದ್ವಾ೦ಸ.    ಆರಿಝೋನ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಗಳಲ್ಲಿ ಪ್ರಾಧ್ಯಾಪಕ.  ಭಾಷಾಶಾಸ್ತ್ರ, ಯುದ್ಧ, ರಾಜಕಾರಣ,, ಮತ್ತು  ಸಮೂಹ ಮಾಧ್ಯಮಗಳ ವಿಷಯಗಳಲ್ಲಿ 150 ಪುಸ್ತಕಗಳ ಲೇಖಕ. ಸೈದ್ಧಾಂತಿಕವಾಗಿ, ಅವರು ಅರಾಜಕ-ಸಿಂಡಿಕಲಿಸಂ ಮತ್ತು ಸ್ವಾತಂತ್ರ್ಯವಾದಿ ಸಮಾಜವಾದದೊಂದಿಗೆ ಹೊಂದಾಣಿಕೆ ಮಾಡುತ್ತಾರೆ . ಯಹೂದಿ ವಲಸಿಗರಿಗೆ ಜನಿಸಿದ ಚೋಮ್ಸ್ಕಿ ಅರಾಜಕತಾವಾದದ ಆರಂಭಿಕ ಆಸಕ್ತಿಯನ್ನು ನ್ಯೂಯಾರ್ಕ್ ನಗರದ ಪರ್ಯಾಯ ಪುಸ್ತಕ ಮಳಿಗೆಗಳಿಂದ.ಬೆಳೆಸಿಕೊಂಡರು ಅವರುಅಧ್ಯಯನ ಮಾಡಿದ್ದು  ಪೆನ್ಸಿಲ್ವೇನಿಯಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ಗಳಲ್ಲಿ .ಭಾಷಾ ಶಾಸ್ತ್ರಕ್ಕೆ ಅವರ ಕೊಡುಗೆ ಸಾಟಿಯಿಲ್ಲದ್ದು.   ವಿಯೆಟ್ನಾಂ ಯುದ್ಧದಲ್ಲಿ ಯುಎಸ್ ಪಾಲ್ಗೊಳ್ಳುವಿಕೆಯನ್ನು ಅಮೆರಿಕದ ಸಾಮ್ರಾಜ್ಯಶಾಹಿಯ ಕೃತ್ಯವೆಂದು ಅವರು ಬಹಿರಂಗವಾಗಿ ವಿರೋಧಿಸಿದವರು . 1
ಇಮೇಜ್
  ಯಾಕೆ ಈ ಬ್ಲಾಗ್ ?      ಮಾಹಿತಿ ಮತ್ತು ಚರ್ಚೆಯ ಮುಕ್ತ ಹರಿವಿನ ಮೂಲಕ  ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ.       ಇಂದು ಮಾಹಿತಿ ಮತ್ತು ಚರ್ಚೆಯ ಸಂಕೀರ್ಣ ವಾತಾವರಣದಲ್ಲಿ, ಕನ್ನಡ ಭಾಷೆಯಲ್ಲಿ ಓದುಗರು ಅದೃಷ್ಟಶಾಲಿಯಾಗಿದ್ದು, ನಮ್ಮಲ್ಲಿ ಒಂದು ಉತ್ಸಾಹಭರಿತ ಮತ್ತು ಮುಕ್ತ ಮಾಧ್ಯಮವಿದೆ, ಅದು ಸಂಬಂಧಿತ ಮತ್ತು ಅಮೂಲ್ಯವಾದ ಮಾಹಿತಿಯನ್ನು ನಾವೆಲ್ಲ ಪಡೆದುಕೊಳ್ಳಲು  ಅನುವು ಮಾಡಿಕೊಡುತ್ತದೆ.      ಆದಾಗ್ಯೂ ಕನ್ನಡ ಭಾಷೆಯಲ್ಲಿ ನೇರವಾಗಿ ಲಭ್ಯವಿಲ್ಲದಿರುವ ಆದರೆ ನಮಗೆಲ್ಲ ಪ್ರಸ್ತುತವಾದ ಉತ್ತಮ ಅಥವಾ ಉಪಯುಕ್ತ ಮೂಲಗಳು ಅನೇಕವಿವೆ.  ಈ ಕೆಲವು ಮೂಲಗಳು  ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ  ಮತ್ತು ಹೆಚ್ಚು ಆಳವಾದ ಚರ್ಚೆಗೆ ಸಹಾಯವಾಗ ಬಹುದು.      ಕನ್ನಡೇತರ ಮೂಲಗಳಿಂದ ನನ್ನ ಪ್ರೀತಿಯ ಕನ್ನಡ ಓದುಗರಿಗೆ ಅಂತಹ ವಸ್ತುಗಳ ಆಯ್ಕೆಯನ್ನು ಲಭ್ಯಗೊಳಿಸುವುದು ನನ್ನ ಉದ್ದೇಶ. ೧.      ನನ್ನ ಮೊದಲನೇ ಬ್ಲಾಗ್ ನೊಮ್ ಚೊಮ್ಸ್ಕಿ ಇವರ ಬಗ್ಗೆ. ವಿಶ್ವಪ್ರಸಿದ್ಧ ಚಿಂತಕ, ಭಿನ್ನಮತೀಯ ಮತ್ತು ಕಾರ್ಯಕರ್ತ, ಲೇಖಕ, ಭಾಷಾಶಾಸ್ತ್ರಜ್ಞ  ನೋಮ್ ಚೋಮ್ಸ್ಕಿಯವರ ಆಲೋಚನೆಗಳು ಮತ್ತು ಕಾರ್ಯಗಳನ್ನು ಈ ಬ್ಲಾಗ್ ಓದುಗರಿಗೆ ಪರಿಚಯಿಸುವ ಉದ್ದೇಶ ನನ್ನದು. ಅವರ ಚರ್ಚೆಗಳು ಮತ್ತು ವಿಶ್ಲೇಷಣೆಗಳು ಯಾರಿಗಾದರೂ ಮುಕ್ತವಾಗಿ ಓದಲು ಅಥವಾ ಕೇಳಲು ಇ೦ಟರ್ನೆಟ್ನಲ್ಲಿ ಲಭ್ಯವಿವೆ. ಇ೦ದಿನ ಲೋಕ ಪರಿಸ್ಥಿತಿ ಯಲ್ಲಿ ಈ ಸ್ಥಿತಪ್ರಜ್ಞ ಮಹಾಪುರುಷನ
ಇಮೇಜ್
ಡೆಮಾಕ್ರಸಿ ಎ೦ಡ್ ಪವರ್ - ಪ್ರಜಾಪ್ರಭುತ್ವ ಮತ್ತು ಅಧಿಕಾರ                                                                                        ನೋಮ್ ಚೋಮ್ಸ್ಕಿ                                                                       ಜಾನ್ ಡ್ರೇಝ ಡೆಮಾಕ್ರಸಿ ಎ೦ಡ್ ಪವರ್ - ಪ್ರಜಾಪ್ರಭುತ್ವ ಮತ್ತು ಅಧಿಕಾರ ಎಂಬುದು ಚೋಮ್ಸ್ಕಿಯ ದೆಹಲಿ ಉಪನ್ಯಾಸಗಳನ್ನು ಒಳಗೊಂಡಿರುವ ಪುಸ್ತಕದ ಶೀರ್ಷಿಕೆಯಾಗಿದೆ. ಇದನ್ನು ಅರ್ಥ ಶಾಸ್ತ್ರಜ್ಞ ಜಾನ್ ಡ್ರೇಝ ಸಂಪಾದಿಸಿದ್ದಾರೆ.   ಚೋಮ್ಸ್ಕಿ ಪ್ರದರ್ಶಿಸಿದ ಒಳನೋಟಗಳನ್ನು ಮತ್ತು ದೂರದೃಷ್ಟಿಯನ್ನು ಮುನ್ನುಡಿಯಲ್ಲಿ ಡ್ರೇಝ ಎತ್ತಿ ತೋರಿಸಿದ್ದಾರೆ.     ಅಧಿಕಾರ ಕೇಂದ್ರೀಕರಣಕ್ಕೆ ನೋಮ್ ಚೋಮ್ಸ್ಕಿಯವರ ತತ್ವಬದ್ಧ ವಿರೋಧದ ತಳಹದಿಯ ಮೇಲೆ ಈ ಉಪನ್ಯಾಸಗಳು ಆಧರಿಸಿವೆ.  ಚೋಮ್ಸ್ಕಿಯ ವಿರೋಧ ರಾಜ್ಯ ಪ್ರಾಧಿಕಾರದ ಅಧಿಕಾರವಾಗಲಿ , ಅಥವಾ ಬೃಹತ್ ವಾಣಿಜ್ಯ ಸಾಂಸ್ಥಿಕ (ಕಾರ್ಪೊರೆಟ್) ಶಕ್ತಿಯದಾಗಲಿ, ಅಥವಾ ನಮಗೆ  ಸಂಬಂಧಿಸಿದಂತೆ ಭಾರತೀಯ ಸಮಾಜದಲ್ಲಿನ ಮೇಲ್ಜಾತಿಗಳದಾಗಲಿ, ಕುಟುಂಬದಲ್ಲಿ ಮಹಿಳೆಯರ ಮೇಲೆ ಪುರುಷರದಾಗಲಿ , ಹೊಣೆಗಾರಿಕೆಯ ಬಗ್ಗೆ  ಪ್ರಶ್ನಾತೀತ  ಮು೦ದಾಳು  ನಾಯಕನದಾಗಲಿ , ಅಥವಾ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಯ ಶಕ್ತಿಯಾಗಲಿ, ಇವುಗಳಿಗೆಲ್ಲ ಅನ್ವಯಿಸುತ್ತವೆ.   ಈ ದ್ದೃಷ್ಟಿ  ಅರಾಜಕತಾವಾದಿ (ಅನಾರ್ಕಿಸ್ಟ್) ಪರ೦ಪರೆಗೆ ಸೇರಿದ್ದು , ಆದರೆ ಚೋಮ್ಸ್ಕಿಯು  ಇದನ್ನು