ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಕೆಲಸದ ಸ್ಥಳದಲ್ಲಿ ಅಪಘಾತಗಳು: ಭಾರತದ 'ಸಾವಿನ ಕಾರ್ಖಾನೆಗಳು' ಅರ್ಚನಾ ಶುಕ್ಲಾ ಬಿಬಿಸಿ ವ್ಯವಹಾರ ವರದಿ 5 ಸೆಪ್ಟೆಂಬರ್ 2022 ಮೇ ತಿಂಗಳಲ್ಲಿ ದೆಹಲಿಯಲ್ಲಿ ಕಾರ್ಖಾನೆಯ ಬೆಂಕಿಯಲ್ಲಿ ಸಾವನ್ನಪ್ಪಿದ 21 ಜನರಲ್ಲಿ ಮುಸ್ಕಾನ್ (ಮುಂಭಾಗದಲ್ಲಿರುವ ಫೋಟೋದಲ್ಲಿ) ಸೇರಿದ್ದರು.      "ಇದು ಸಾವುಗಳ ಕಾರ್ಖಾನೆ."   ಭಾರತದ ರಾಜಧಾನಿ ದೆಹಲಿಯಲ್ಲಿ ಸುಟ್ಟ ಕಟ್ಟಡದ ಎರಡನೇ ಮಹಡಿಯ ಕಡೆಗೆ ತೋರಿಸುತ್ತಿರುವಾಗ ಇಸ್ಮಾಯಿಲ್ ಖಾನ್ ಕೈ ನಡುಗುತ್ತದೆ.   ಅಲ್ಲಿ ಅವನು  ಬೆಂಕಿಯಿಂದ ಸುಟ್ಟುಹೋಗುತ್ತಿದ್ದ ಕಟ್ಟಡದೊಳಗೆ ಹೊಗೆಯಿ೦ದ ಪಾರಾಗಲು ಸಾಧಿಸದೆ   ಹತಾಶಳಾಗಿ ಕೊನೆಯ ಬಾರಿಗೆ ತನ್ನ ತಂಗಿಯನ್ನು ನೋಡಿದನು.    ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ ಬೃಹತ್ ಬೆಂಕಿಯಲ್ಲಿ 27 ಮಂದಿ ಸಾವನ್ನಪ್ಪಿದವರಲ್ಲಿ 21 ವರ್ಷದ ಮುಸ್ಕಾನ್ ಸೇರಿದ್ದಳು.   ಕಟ್ಟಡದ ಮಾಲೀಕರು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರಿಂದ ಸಮ್ಮತಿಯ  ಪ್ರಮಾಣಪತ್ರಗಳನ್ನು ಪಡೆದಿದ್ದಿಲ್ಲ, ಹಾಗೆಯೇ , ಕಟ್ಟಡದ ಮೂರು ಮಹಡಿಗಳನ್ನು ಉತ್ಪಾದನಾ ಘಟಕವನ್ನು ನಡೆಸುತ್ತಿದ್ದ ಇಬ್ಬರು ಸಹೋದರರಿಗೆ ಬಾಡಿಗೆಗೆ ಕೊಡುವ  ಮೊದಲು, ಈ ಘಟಕವು ಕಾರ್ಯಾಚರಣೆಗೆ ಅಗತ್ಯವಾದ ಪರವಾನಗಿಗಳನ್ನು ಹೊಂದಿದ್ದಿಲ್ಲ ಎಂದು ದೆಹಲಿ ಪೊಲೀಸರು  ಬೆಂಕಿಯ ನಂತರ ಬಿಬಿಸಿಗೆ ತಿಳಿಸಿದ್ದಾರೆ.   ಕಾರ್ಖಾನೆ ಮಾಲೀಕರಿಗೆ ಬಿಬಿಸಿ ಹಲವು ಬಾರ