ಧರ್ಮ ಅಥವಾ ದೈವ ವಿಶ್ವಾಸವನ್ನು ಮನುಷ್ಯರೇ ಕಂಡುಹಿಡಿದರು: ದೇವರಲ್ಲ.
(ಟಿಪ್ಪಣಿ : ಈ ಲೇಖನದಲ್ಲಿ ಬಹುವಾಗಿ ಧರ್ಮ ಎಂಬ ಪದವನ್ನು
ಆಂಗ್ಲ ಪದ Religion ಗೆ ಅನುಕೂಲಕರವಾದ ಸಂಕ್ಷಿಪ್ತ ಪರ್ಯಾಯ ರೂಪವಾಗಿ ಬಳಸಲಾಗುತ್ತದೆ.)
ಒಂದು ಸರಳ ಅವಲೋಕನದಿಂದ ಪ್ರಾರಂಭಿಸೋಣ.
ಪ್ರಪಂಚದಾದ್ಯಂತ ಮಾನವರು ಸಾವಿರಾರು ವಿಭಿನ್ನ ಧರ್ಮಗಳನ್ನು ನಂಬುತ್ತಾರೆ - ಕೆಲವೇ ಅಲ್ಲ , ಆದರೆ ಅಕ್ಷರಶಃ ಸಾವಿರಾರು,
ಪ್ರತಿಯೊಂದೂ ಅಂತಿಮ ಸತ್ಯವನ್ನು ಹೊಂದಿದೆ ಎಂದು ಹೇಳಿ ಕೊಳ್ಳುತ್ತದೆ, ಪ್ರತಿಯೊಂದೂ ವಿಭಿನ್ನ, ವಿಭಿನ್ನ ಸೃಷ್ಟಿ ಕಥೆಗಳು, ವಿಭಿನ್ನ ನಿಯಮಗಳು, ಆಚರಣೆಗಳು, ಮತ್ತು ಮರಣಾನಂತರದ ಜೀವನ ನಂಬಿಕೆಗಳು.
ಕೆಲವರು ಒಬ್ಬನೇ ದೇವರು ಇದ್ದಾನೆ ಎಂದು ಹೇಳುತ್ತಾರೆ, ಇತರರು ದೇವರು ಹಲವರು ಎನ್ನುತ್ತಾರೆ. ಕೆಲವರು ಮೂರ್ತಿಗಳು ಬಾರದು ಎಂದು ಹೇಳಿದರೆ , ಇತರ ದೈವ ವಿಶ್ವಾಸ ಪಧ್ದತಿಗಳು ಪ್ರತಿಮೆಗಳಿಂದ ತುಂಬಿವೆ. . ಕೆಲವರು ಮರಣಾನಂತರ ಸ್ವರ್ಗ ಮತ್ತು ನರಕಗಳು ಅಂತಿಮ , ಶಾಶ್ವತ ಎಂದು ಹೇಳುತ್ತಾರೆ, ಇತರರು ಪುನರ್ಜನ್ಮ ಸಂಭವಿಸುತ್ತದೆ ಎಂದು ವಾದಿಸುತ್ತಾರೆ
ಮಾನವರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಕಥೆಗಳು ಮತ್ತು ವ್ಯವಸ್ಥೆಗಳನ್ನು ಪ್ರಯತ್ನಿಸುತ್ತಾ ಬಹುಸಂಖ್ಯೆಯಲ್ಲಿ ವಿವಿಧ ವಿಚಾರಗಳನ್ನು ಪರೀಕ್ಷಿಸುತ್ತಿರುವಂತೆ ತೋರುತ್ತಿದೆ. ಮತ್ತು ನಿಜವಾಗಿಯೂ ಸಂಭವಿಸಿರುವದು ಇದೇ.
ನಾವು ಧರ್ಮವನ್ನು ನಂಬಿಕೆಯ ಮಸೂರದ ಮೂಲಕ ಅಲ್ಲ, ಇತಿಹಾಸ, ಮನೋವಿಜ್ಞಾನ ಮತ್ತು ಸರಳ ತಾರ್ಕಿಕತೆಯ ಮೂಲಕ ಹತ್ತಿರದಿಂದ ನೋಡಿದಾಗ ಸ್ಪಷ್ಟ ಚಿತ್ರಣ ರೂಪುಗೊಳ್ಳುತ್ತದೆ.
ಧರ್ಮವು ನಮಗೆ ಆಕಾಶದಿಂದ ನೀಡಲ್ಪಟ್ಟದ್ದಲ್ಲ; ಅದು ವಿಶೇಷವಾಗಿ ವಿವರಿಸಲಾಗದ ಘಟನೆಗಳನ್ನು ಎದುರಿಸುವಾಗ ನಮ್ಮ ಭಯ, ಆಸೆ, ಅಜ್ಞಾನ, ಪ್ರಜ್ನಾವಂತ ಮಾನವನ ಜನ್ಮಜಾತವಾಗಿ ಆವಶ್ಯಕತೆಗಳಾಗಿ ಪರಿಗಣಿಸುವ ಗುಣಗಳಾದ ವ್ಯವಸ್ಥಿಕತೆ, ಕ್ರಮಬದ್ಧ್ಯತೆ, ಮತ್ತು ಅರ್ಥವತ್ತತೆ ಇವುಗಳ ನೆಲದಿಂದ ಬೆಳೆದದ್ದು.
ಬೈಬಲ್, ಕುರಾನ್, ಭಾರತದ ದೇವಾಲಯಗಳು ಮತ್ತು ಟಿಬೆಟ್ನ ಮಠಗಳ ಸ್ಥಾಪನೆಯ ಮೊದಲು ಬಹಳ ಹಿಂದೆಯೇ ಹಿಂತಿರುಗಿ ನೋಡೋಣ. ನಗರಗಳ ಮೊದಲು, ಕೃಷಿಯ ಮೊದಲು, ಆರಂಭಿಕ ಮಾನವಿಕ ಸಮಾಜಗಳಲ್ಲಿ, ನಮ್ಮ ಪೂರ್ವಜರು ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಜೀವನವು ಅಪಾಯಕಾರಿ, ಅನಿರೀಕ್ಷಿತ ಮತ್ತು ಅಲ್ಪಕಾಲಿಕವಾಗಿತ್ತು.
ಅವರಿಗೆ ರೋಗ ಅರ್ಥವಾಗಲಿಲ್ಲ. ಗುಡುಗು ಸಹಿತ ಮಳೆ ಅಥವಾ ಭೂಕಂಪಕ್ಕೆ ಕಾರಣವೇನೆಂದು ಅವರಿಗೆ ತಿಳಿದಿರಲಿಲ್ಲ. ಸಾವಿನ ನಂತರ ಏನಾಗುತ್ತದೆ ? ಇದೊಂದು ಯಕ್ಷ ಪ್ರಶ್ನೆಯೇ ಆಗಿತ್ತು. ಈ ಪರಿಸ್ಥಿತಿ ಯಲ್ಲಿ ಅವರು ಏನು ಮಾಡಿದರು? ಅವರು ವಿವರಣೆಗಳನ್ನು ರಚಿಸಿದರು, ಕಥೆಗಳನ್ನು ಹೇಳಿದರು. ಗೊಂದಲಕ್ಕೊಳಗಾದಾಗ ಮಾನವರು ಮಾಡುವದು ಇದನ್ನೇ - ನಾವು ಕಲ್ಪಿಸಿಕೊಳ್ಳುತ್ತೇವೆ, ಊಹಿಸುತ್ತೇವೆ.
ಮತ್ತು ಆರಂಭಿಕ ಮಾನವರು ಏನು ಊಹಿಸಿದರು? ಗಾಳಿಯಲ್ಲಿ ಆತ್ಮಗಳು, ಆಕಾಶದಲ್ಲಿ ದೇವರುಗಳು, ಪ್ರತಿಯೊಂದು ನೈಸರ್ಗಿಕ ಘಟನೆಯ ಹಿಂದೆ ಅದೃಶ್ಯ ಶಕ್ತಿಗಳು. ಮರವು ಕೇವಲ ಮರವಾಗಿರಲಿಲ್ಲ. ಅದಕ್ಕೆ ಒಂದು ಚೈತನ್ಯವಿತ್ತು. ಪರ್ವತಗಳು ಕೇವಲ ಬಂಡೆಯಾಗಿರಲಿಲ್ಲ ಅದು ದೇವರ ಮನೆಯಾಗಿತ್ತು.
ಇದು ಮೂರ್ಖತನವಲ್ಲ. ಇದು ಸೃಜನಶೀಲತೆ. ಇದು ಗೊಂದಲಮಯ ಜಗತ್ತನ್ನು ಅರ್ಥಮಾಡಿಕೊಳ್ಳುವ ಒಂದು ಮಾರ್ಗವಾಗಿತ್ತು. ಅದು ಸಾಂತ್ವನವನ್ನು ತಂದಿತು. ಅದು ಘಟನೆಗಳ ಮೇಲೆ ನಿಯಂತ್ರಣದ ಭಾವನೆಯನ್ನು ನೀಡಿತು.
ದೇವರುಗಳು ಕೋಪಗೊಂಡರೆ ಅವರನ್ನು ಪ್ರೀತಿಪಡಿಸಲು ನಾವು ಏನನ್ನಾದರೂ ಅರ್ಪಿಸಬೇಕು. ಮಳೆ ಬರದಿದ್ದರೆ ನಮಗೆ ಒಂದು ಆಚರಣೆ ಬೇಕಾಗಬಹುದು. ಇಲ್ಲಿಯೇ ಧರ್ಮ ಪ್ರಾರಂಭವಾಗುತ್ತದೆ, ಸತ್ಯದಿಂದಲ್ಲ, ಆದರೆ ಊಹೆಯೊಂದಿಗೆ ಮತ್ತು ಕಾಲಾನಂತರದಲ್ಲಿ ಆ ಊಹೆಗಳು ವ್ಯವಸ್ಥೆಗಳಾದವು, ಅವು ಸಂಪ್ರದಾಯಗಳಾದವು, ಅವು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲ್ಪಟ್ಟವು ಮತ್ತು ಹೆಚ್ಚು ವಿವರವಾದವು. ದೇವರುಗಳಿಗೆ ಮಾನವರೂಪತೆ ಹೊಂದಿಸಿ ತಮ್ಮದೇ ಆದ ವ್ಯಕ್ತಿತ್ವಗಳನ್ನೂ ಕೌಟುಂಬಿಕ ಸಂಬಂಧಗಳನ್ನೂ ಕುಟುಂಬಗಳ ಹೆಸರುಗಳನ್ನೂ ನೀಡಲಾಯಿತು.
ಪುರಾಣಗಳನ್ನು ಬರೆಯಲಾಯಿತು ಆಚರಣೆಗಳನ್ನು ರಚಿಸಲಾಯಿತು ಮತ್ತು ಕ್ರಮೇಣ ನಿಧಾನವಾಗಿ ಧರ್ಮವು ಕಾನೂನು ಮತ್ತು ಅಧಿಕಾರದ ರಾಜಕೀಯದ ಗುರುತಿನ ಭಾಗವಾಯಿತು .
ಆದರೆ ಮುಖ್ಯವಾದುದು ಇದು: ಮಾನವರ ವಿವಿಧ ಗುಂಪುಗಳು ವಿಕಸನಗೊಂಡಂತೆ ಪ್ರತ್ಯೇಕವಾಗಿ ಅವರು ವಿಭಿನ್ನ ಧಾರ್ಮಿಕ ಕಥೆಗಳನ್ನು ರಚಿಸಿದರು. ಆಫ್ರಿಕಾದಲ್ಲಿ ಒಂದು ಬುಡಕಟ್ಟುಸಮಾಜ ಒಂದು ಕಥೆಯನ್ನು ಸೃಷ್ಟಿಸಿದರೆ ಮಧ್ಯ ಪ್ರ್ರಾಚ್ಯದ ಮೂಲಜನಾಂಗದವರು ಬೇ ರೊಂದು ಕಥೆಯನ್ನು ದಕ್ಷಿಣ ಅಮೆರಿಕ ದವರು ಸಂಪೂರ್ಣವಾಗಿ ಬೇರೆಯದೆ ಕಥೆಗಳನ್ನು ಕಂಡುಹಿಡಿದರು
ಧರ್ಮವು ಒಂದೇ ದೈವಿಕ ಮೂಲದಿಂದ ಬಂದಿದ್ದರೆ ಅದು ಎಲ್ಲೆಡೆ ಒಂದೇ ಆಗಿರುವುದಿಲ್ಲವೇ ? ಆದರೆ ಅದು ಆ ರೀತಿ ಆಗಲಿಲ್ಲ ಧಾರ್ಮಿಕ ಕಥೆಗಳು ಸ್ಥಳೀಯ ಸಂಸ್ಕೃತಿ ಭೌಗೋಳಿಕತೆ ಮತ್ತು ಪರಿಸರವನ್ನು ಪ್ರತಿಬಿಂಬಿಸುತ್ತದೆ ಬಿಸಿ ಮರುಭೂಮಿ ಹವಾಮಾನದಲ್ಲಿ ದೇವರುಗಳು ಹೆಚ್ಚು ಉಗ್ರರು ಮತ್ತು ಅಸೂಯೆಯನ್ನು ಪ್ರದರ್ಶಿಸುವರು. . ಹಚ್ಚ ಹಸಿರಿನ ಅರಣ್ಯ ಪ್ರದೇಶಗಳಲ್ಲಿ ದೇವರುಗಳು ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ
ನೈತಿಕತೆಯ ವ್ಯವಸ್ಥೆಗಳುಯೂ ಸಹ ಭಿನ್ನವಾಗಿರುತ್ತವೆ ಏಕೆಂದರೆ ಸತ್ಯವು ಸ್ಥಳದಿಂದ ಸ್ಥಳಕ್ಕೆ ಕಾಲದಿಂದ ಕಾಲಕ್ಕೆ ಬದಲಾಗುವುದಿಲ್ಲವಾದರೂ ಮಾನವರು ಬದಲಾಗುತ್ತಾರೆ.
ದೇವರ ರೂಪದ ಕಲ್ಪನೆಯನ್ನು ನೋಡಿ
ಪಾಶ್ಚಿಮಾತ್ಯ ಧರ್ಮಗಳಲ್ಲಿ ದೇವರನ್ನು ಸಾಮಾನ್ಯವಾಗಿ ಶಕ್ತಿಶಾಲಿ ಮನುಷ್ಯನಾಗಿ, ಬಿಳಿ ಗಡ್ಡ ಧರಿಸಿ ಸಿಂಹಾಸನಾಸೀನನಾಗಿ ಆಳವಾದ ಧ್ವನಿಯಲ್ಲಿ ಆಜ್ಞೆ ಮಾಡುವದಾಗಿ ಕಲ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನೀಲಿ ಚರ್ಮವನ್ನು ಹೊಂದಿ ಅನೇಕ ತೋಳುಗಳು ಮತ್ತು ಭಾರಿ ಆಭರಣ. ಧರಿಸುವರನ್ನು ಕಾಣಬಹುದು. ಕೆಲವು ಆಫ್ರಿಕನ್ ಧರ್ಮಗಳಲ್ಲಿ ದೇವರುಗಳು ಹೆಚ್ಚು ಅಮೂರ್ತರು ,ವ್ಯಕ್ತಿಗಳಿಗಿಂತ ಇವು ಪ್ರಕೃತಿಯ ಶಕ್ತಿಗಳು
ಇವೆಲ್ಲ ದೈವಿಕ ವಾಸ್ತವದ ಪುರಾವೆಗಳಲ್ಲ - ಬದಲಾಗಿ ಇವು ಮಾನವನ ಕಲ್ಪನಾಶಕ್ತಿಯ ಪುರಾವೆಗಳು. . ನಾವು ದೇವರುಗಳನ್ನು ನಮ್ಮ ರೂಪದಲ್ಲಿ ಚಿತ್ರಿಸುತ್ತೇವೆ , ಅಲ್ಲದೆ ಇದಕ್ಕೆ ವಿರುದ್ಧವಾಗಿ ಅಲ್ಲ.
ಮತ್ತು ಧರ್ಮವು ಖಂಡಿತವಾಗಿ ಭಾಷೆಯನ್ನು ಅನುಸರಿಸುತ್ತದೆ. ಕುರಾನ್ ಅರೇಬಿಕ್ನಲ್ಲಿದೆ
ವೇದಗಳು ಸಂಸ್ಕೃತದಲ್ಲಿವೆ. ಬೈಬಲ್ನ ಮೂಲ ಪಠ್ಯಗಳು ಹೀಬ್ರೂ ಮತ್ತು ಗ್ರೀಕ್ನಲ್ಲಿವೆ
.
ಈ ಪಠ್ಯಗಳು ವಿಶ್ವವ್ಯಾಪಿ ಸಾರ್ವತ್ರಿಕ ಭಾಷೆಗಳಲ್ಲಿ ಆಕಾಶದಿಂದ ಬೀಳಲಿಲ್ಲ ಅವುಗಳನ್ನು ಜನರು ತಾವು ತಿಳಿದಿರುವ ವಿಚಾರಗಳನ್ನು ಬಳಸಿಕೊಂಡು ತಾವು ಮಾತನಾಡಿದ ಭಾಷೆಗಳಲ್ಲಿ ಬರೆಯಲಾಗಿದೆ ಮತ್ತು ಮಾನವನಿರ್ಮಿತ ಕಥೆಗಳು ನಡವಳಿಕೆ ಮಾಡುವುದು ನಿಖರವಾಗಿ ಹೀಗೆಯೇ.
ಈಗ ನೈತಿಕತೆಯ ಬಗ್ಗೆ ಮಾತನಾಡೋಣ. ಧರ್ಮವು ನಮಗೆ ನೈತಿಕತೆಯನ್ನು ಸರಿ ಮತ್ತು ತಪ್ಪುಗಳ ಅರ್ಥವನ್ನು ನೀಡುತ್ತದೆ ಎಂದು ಅನೇಕರು ಹೇಳುವರು. ಆದರೆ ಧರ್ಮಗಳಿಗಿಂತ ಮೊದಲು ನೈತಿಕತೆ ಅಸ್ತಿತ್ವದಲ್ಲಿತ್ತು. ಮತ್ತು ವಿಭಿನ್ನ ಧರ್ಮಗಳಲ್ಲಿ ವಿಭಿನ್ನ ನೈತಿಕ ಸಂಹಿತೆಗಳಿವೆ. ಕೆಲವರು ಬಹುಪತ್ನಿತ್ವವನ್ನು ಅನುಮತಿಸುತ್ತಾರೆ. ಇತರರು ಅದನ್ನು ನಿಷೇಧಿಸುತ್ತಾರೆ. ಕೆಲವರು ಪ್ರಾಣಿ ಬಲಿಯನ್ನು ಬೇಡುತ್ತಾರೆ. ಇತರರು ಅದನ್ನು ಕ್ರೂರವೆಂದು ನೋಡುತ್ತಾರೆ. ಕೆಲವು ಧರ್ಮಗಳು ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತವೆ ಇತರರು ಅದರ ವಿರುದ್ಧ ಹೋರಾಡುತ್ತಾರೆ. ನೈತಿಕತೆಯು ಧರ್ಮದಲ್ಲಿ ಸ್ಥಿರವಾಗಿರುವುದಿಲ್ಲ. ಅದು ವಿಕಸನಗೊಳ್ಳುತ್ತದೆ. ಸಮಾಜಗಳು ಬದಲಾಗುತ್ತವೆ ಮತ್ತು ಅವರ ನೀತಿಶಾಸ್ತ್ರವೂ ಬದಲಾಗುತ್ತದೆ. ವ್ಯಭಿಚಾರಿಗಳಿಗೆ ಕಲ್ಲು ಹೊಡೆಯುವುದು ಅಥವಾ ಧರ್ಮಭ್ರಷ್ಟರಿಗೆ ಮರಣದಂಡನೆ ವಿಧಿಸುವುದು ಈ ತರದ ಪ್ರಾಚೀನ ಧಾರ್ಮಿಕ ನೈತಿಕತೆಯ ಅನೇಕ ಭಾಗಗಳನ್ನು ಜನರು ಈಗ ತಿರಸ್ಕರಿಸುತ್ತಾರೆ ಎಂಬ ಅಂಶವು. ಮಾನವ ನೈತಿಕತೆಯು ಧಾರ್ಮಿಕ ನಿಯಮಗಳನ್ನು ಮೀರಿದೆ ಎಂದು ತೋರಿಸುತ್ತದೆ. ಮತ್ತು ಅದು ನಮಗೆ ಧರ್ಮವು ನೈತಿಕತೆಯನ್ನು ಸೃಷ್ಟಿಸಲಿಲ್ಲ, ನೈತಿಕತೆಯು ಮಾನವ ಸಮಾಜದೊಂದಿಗೆ ವಿಕಸನಗೊಂಡಿತು ಎಂದು ಹೇಳುತ್ತದೆ.
ಧರ್ಮವು ಮಾನವ ನಿರ್ಮಿತವಾಗಿದೆ ಎಂಬುದಕ್ಕೆ ಅತ್ಯಂತ ಗಮನಾರ್ಹ ಚಿಹ್ನೆಗಳಲ್ಲಿ ಒಂದು, ಅದು ಅದರ ಕಾಲದ ಪಕ್ಷಪಾತ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಗ್ರಂಥಗಳು ಇಂದು ನಾವು ಆಘಾತಕಾರಿ ಎಂದು ಭಾವಿಸುವ ವಿಚಾರಗಳನ್ನು ಒಳಗೊಂಡಿವೆ. ಗುಲಾಮಗಿರಿಯನ್ನು ಸ್ವೀಕರಿಸಲಾಗಿದೆ, ಮಹಿಳೆಯರನ್ನು ಆಸ್ತಿಯಾಗಿ ಪರಿಗಣಿಸಲಾಗುತ್ತದೆ, ಸಣ್ಣ ಅಪರಾಧಗಳಿಗೆ ಜನರನ್ನು ಕೊಲ್ಲಲಾಗುತ್ತದೆ. ಪರಿಪೂರ್ಣ (ಕಾಲಾತೀತ) ದೇವರು ಜನರಿಗೆ ಇಂತಹ ಕ್ರೂರ ಮತ್ತು ಹಳತಾದ ನಿಯಮಗಳನ್ನು ಏಕೆ ನೀಡುತ್ತಾನೆ. ಸರಳವಾದ ಉತ್ತರವೆಂದರೆ ಅವನು ಆ ನಿಯಮಗಳನ್ನು ಬರೆದಿಲ್ಲ ಜನರು ಅವರು ವಾಸಿಸುತ್ತಿದ್ದ ಜಗತ್ತನ್ನು ಪ್ರತಿಬಿಂಬಿಸುತ್ತದೆ.
ಇಂದು ಯಾರಾದರೂ ಪವಿತ್ರ ಪುಸ್ತಕವನ್ನು ಬರೆದರೆ ಅದು ಮಾನವ ಹಕ್ಕುಗಳು, ಸಂಬಂಧಪಟ್ಟ ವ್ಯಕ್ತಿಯ ಒಪ್ಪಿಗೆ, ಪ್ರಜಾಪ್ರಭುತ್ವ, ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡಬಹುದು. ಆದರೆ ಪ್ರಾಚೀನ ಪುಸ್ತಕಗಳು ಈ ವಿಷಯಗಳನ್ನು ಉಲ್ಲೇಖಿಸುವುದಿಲ್ಲ ಏಕೆಂದರೆ ದೇವರು ಅಂದು ಕಾಳಜಿ ವಹಿಸಲಿಲ್ಲ ಎನ್ನುವ ಕಾರಣದಿಂದಲ್ಲ, ಆದರೆ ಪ್ರಾಚೀನ ಜನರಿಗೆ ಅವುಗಳ ಬಗ್ಗೆ ತಿಳಿದಿರಲಿಲ್ಲ ಎನ್ನುವ ಕಾರಣದಿಂದ.
ಧರ್ಮದ ಭರವಸೆಗಳು ಸಹ ಮಾನವ ಆಸೆ ಗಳಿಗೆ ಹೊಂದಿಕೆಯಾಗುತ್ತವೆ. ಪ್ರೀತಿಪಾತ್ರರೊಂದಿಗೆ ಶಾಶ್ವತ ಜೀವನ, ಮರಣಾನಂತರ ಪುನರ್ಮಿಲನಗಳು, ಸಂಕಟಗಳನ್ನೆಲ್ಲ ಕೊನೆಗೊಳ್ಳಿಸುವ ಸ್ವರ್ಗವಾಸ: ಇವು ಸತ್ಯಗಳ ಲ್ಲ ; ಇವು ಮಾನವ ಸಹಜ ಆಸೆಗಳು
ಶಾಶ್ವತವಾಗಿ ಬದುಕಲು ಕಳೆದುಹೋದ ಪ್ರೀತಿಪಾತ್ರರನ್ನುಮತ್ತೆ ನೋಡಲು ಬಯಸದೆ ಇರುವವರು ಯಾರೂ ಇರಲಿಕ್ಕಿಲ್ಲ.
ಮತ್ತು ಧರ್ಮಗಳು ಅವುಗಳನ್ನು ನೀಡುವದು ಅವು ನಿಜವಾಗಿರುವುದರಿಂದ ಅಲ್ಲಅವು ಸಾಂತ್ವನದಾಯಕವಾಗಿರುವುದರಿಂದ.
ಇದು ಭಾವನಾತ್ಮಕ ಮಾರ್ಕೆಟಿಂಗ್. ಸಾವನ್ನು ಎದುರಿಸಿದಾಗ ನೋವನ್ನು ಕಡಿಮೆ ಮಾಡಲು ನಾವು ಕಥೆಗಳನ್ನು ರಚಿಸುತ್ತೇವೆ. ಇದು ಮಾನವರು ಮಾಡುವ ಕಾರ್ಯ. .
ಈಗ ಪರಿಗಣಿಸಿ ಧರ್ಮವು ಇತಿಹಾಸದುದ್ದಕ್ಕೂ ಅಧಿಕಾರದೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಧರ್ಮ ಮತ್ತು ಅಧಿಕಾರವು ಜೊತೆಜೊತೆಯಾಗಿ ಹೋಗಿದೆ. ರಾಜರು ದೈವಿಕ ಹಕ್ಕಿನಿಂದ ಆಳ್ವಿಕೆ ನಡೆಸುವುದಾಗಿ ಹೇಳಿಕೊಂಡರು . ಬಲಶಾಲಿ ಪೋಪ್ಗಳು ಚಕ್ರವರ್ತಿಗಳಿಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದರು ಧಾರ್ಮಿಕ ನಾಯಕರು ರಾಜ್ಯವನ್ನು ಆಶೀರ್ವದಿಸಬಹುದು ಅಥವಾ ಶಪಿಸಬಹುದಿತ್ತು. ಏಕೆಂದರೆ ಧರ್ಮವು ಎಲ್ಲಕ್ಕಿಂತ ಪ್ರಬಲವಾದ ಸಾಧನವಾದ ಅಧಿಕಾರವನ್ನು ನೀಡಿತು - ವಿಧೇಯತೆ .
ಜನರು ಒಂದು ನಿಯಮವು ದೇವರಿಂದ ಬರುತ್ತದೆ ಎಂದು ನಂಬಿದರೆ ಅದು ಅನ್ಯಾಯವಾಗಿದ್ದರೂ ಸಹ .ಅದನ್ನು ವಿಧೇಯತೆಯಿಂದ ಸ್ವೀಕರಿಸುತ್ತಾರೆ. ಅದು ಸತ್ಯದ ಪುರಾವೆಯಲ್ಲ, ಕುಶಲತೆಗೆ ಸಾಕ್ಷಿಯಾಗಿದೆ .
ಮತ್ತು ಸಮಾಜ ಬದಲಾದಾಗ ಧರ್ಮವು ಹೇಗೆ ಬದಲಾಗುತ್ತದೆ ಎಂಬುದನ್ನು ನಿರ್ಲಕ್ಷಿಸಬಾರದು .
ಕ್ರಿಶ್ಚಿಯನ್ ಧರ್ಮವನ್ನು ತೆಗೆದುಕೊಳ್ಳಿ . ಆರಂಭಿಕ ದಿನಗಳಲ್ಲಿ ಅದು ನಮ್ರತೆ ಮತ್ತು ಬಡತನದ ಬಗ್ಗೆ . ಕಾಲಾನಂತರದಲ್ಲಿ ಚರ್ಚುಗಳು ಶ್ರೀಮಂತವಾದ ಶಕ್ತಿಶಾಲಿಯಾದ ಸಂಸ್ಥೆಗಳಾದವು . ಇಸ್ಲಾಂ ಒಂದು ಸಣ್ಣ ಹಿಂಸೆಗೊಳಗಾದ ಚಳುವಳಿಯಿಂದ ಸಾಮ್ರಾಜ್ಯಗಳ ಅಡಿಪಾಯಕ್ಕೆ ಹೋಯಿತು . ಹಿಂದೂ ಧರ್ಮವು ಹೊಸ ವಿಚಾರಗಳನ್ನು ಹೀರಿಕೊಳ್ಳುವ ಮೂಲಕ ಶತಮಾನಗಳ ಬದಲಾವಣೆಗೆ ಹೊಂದಿಕೊಂಡಿತು . ಈ ಹೊಂದಿಕೊಳ್ಳುವಿಕೆಯು ಧರ್ಮವು ಸ್ಥಿರ ಸತ್ಯವಲ್ಲ . ಇದು ವಿಕಸನಗೊಳ್ಳುವ ಸಾಂಸ್ಕೃತಿಕ ವ್ಯವಸ್ಥೆ ಎಂದು ತೋರಿಸುತ್ತದೆ. .
ನಿಜವಾದ ಸತ್ಯವು ವಿಕಸನಗೊಳ್ಳುವುದಿಲ್ಲ. 2 + 2 ಯಾವಾಗಲೂ ನಾಲ್ಕು ಆಗಿರುತ್ತದೆ.
ಗುರುತ್ವಾಕರ್ಷಣೆಯು ಯಾವಾಗಲೂ ವಸ್ಟು ಗಳನ್ನು ಕೆಳಕ್ಕೆ ಎಳೆಯುತ್ತದೆ. ಆದರೆ ಧರ್ಮವು ಸಮಯ, ಶಕ್ತಿ ಮತ್ತು ರಾಜಕೀಯದೊಂದಿಗೆ ಬದಲಾಗುತ್ತದೆ.
ಈಗ ಮಕ್ಕಳು ಹೇಗೆ ಧರ್ಮವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡಿ. ಸೌದಿ ಅರೇಬಿಯಾದಲ್ಲಿ ಜನಿಸಿದ ಮಗು ಮುಸ್ಲಿಂ, ಇಟಲಿಯಲ್ಲಿ ಜನಿಸಿದ ಮಗು ಕ್ಯಾಥೋಲಿಕ್, ಭಾರತದಲ್ಲಿ ಹಿಂದೂ, ಥೈಲ್ಯಾಂಡ್ನಲ್ಲಿ ಬೌದ್ಧ ಆಗುವುದೇ ಹೆಚ್ಚಾಗಿ ಸಾಧ್ಯ.
ಆ ಧರ್ಮಗಳು ಆ ಸ್ಥಳಗಳಲ್ಲಿ ಹೆಚ್ಚು ನಿಜವಾಗಿರುವುದರಿಂದ ಅಲ್ಲ. ನಂಬಿಕೆಯನ್ನು ಕಲಿಸಲಾಗುತ್ತದೆ, ಮಕ್ಕಳಿಂದ ತಾವೇ ಕಂಡುಹಿಡಿಯಲಾಗುವುದಿಲ್ಲ. ಮಕ್ಕಳು ಸ್ವತಂತ್ರವಾಗಿ ದೇವರನ್ನು ಕಂಡುಕೊಳ್ಳು.ವುದಿಲ್ಲ. ಅವರು ಭಾಷೆ ಅಥವಾ ಆಹಾರದ ಒಲವಿನಂತೆಯೇ ದೈವ ನಂಬಿಕೆಯನ್ನು ಆನುವಂಶಿಕವಾಗಿ ಪಡೆಯುತ್ತಾರೆ.
ಸಂಸ್ಕೃತಿ ಕೆಲಸ ಮಾಡುವದು ಹೀಗೆಯೇ . .ಹುಟ್ಟಿನಿಂದ ನಾವೆಲ್ಲಾ ಕೇವಲ ಮಾನವರು ಮಾತ್ರ.
ಕ್ರಿಶ್ಚಿಯನ್ ಅಥವಾ ಮುಸ್ಲಿಂ ಅಥವಾ ಹಿಂದೂ ಗುರುತು ಪಟ್ಟಿಲೇಬಲ್ಗಳು ನಂತರ ನಿಮ್ಮ
ಪರಿಸರದಿಂದ ಬರುತ್ತವೆ . ಧರ್ಮವು ವಿಶ್ವವ್ಯಾಪ್ತಿಯ ಸಾರ್ವತ್ರಿಕ ದೇವರಿಂದ ಬಂದಿದ್ದರೆ
ಜನ್ಮಸ್ಥಳವನ್ನು ಅವಲಂಬಿಸಿರುವುದಿಲ್ಲ
ಆದರೆ ಅದು ಅವಲಂಬಿಸಿರುತ್ತದೆ ಎನ್ನುವದು ನಮಗೆ ಮುಖ್ಯವಾದದ್ದನ್ನು ಹೇಳುತ್ತದೆ .
ಇದಲ್ಲದೆ ಧರ್ಮಗಳು ಪರಸ್ಪರ ಎರವಲು ಪಡೆಯುತ್ತವೆ. ಕ್ರಿಶ್ಚಿಯನ್ ಧರ್ಮವು ಯಹೂದಿ ಧರ್ಮದಿಂದ ಮತ್ತು ಪೇಗನ್ ಸಂಪ್ರದಾಯಗಳ ವಿ ಚಾರಗಳನ್ನು ಎರವಲು ಪಡೆಯುತ್ತದೆ
ಇಸ್ಲಾಂ ಯಹೂದಿ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ, ಬೌದ್ಧಧರ್ಮ ಹಿಂದಿನ ಭಾರತೀಯ ನಂಬಿಕೆಗಳಿಂದ ಪ್ರಭಾವಿತವಾಗಿದೆ .
.ಪ್ರಾಚೀನ ಪುರಾಣಗಳು ಸಹ ಸಾಮಾನ್ಯವಾದ ವಿಷಯಗಳನ್ನು ಹಂಚಿಕೊಳ್ಳುತ್ತವೆ
ವಿಷಯಗಳು- ಪ್ರವಾಹಗಳು, ಕನ್ಯೆಯ ಜನನಗಳು, ರಕ್ಷಕ ಆಕೃತಿಗಳು.ಇವು ಮೂಲ
ಬಹಿರಂಗಪಡಿಸುವಿಕೆಗಳಲ್ಲ. .ಅವು ಮರುಬಳಕೆ ಮಾಡಲ್ಪಟ್ಟಿರುವ ಕಥೆಗಳು.
ಧರ್ಮವು ಭಾಷೆಯಂತೆ ಕಲೆಯಂತೆ ಸಂಗೀತದಂತೆ ಹಿಂದೆ ಬಂದದ್ದನ್ನು ರೀಮಿಕ್ಸ್ - ಮರುಮಿಶ್ರಣ -
ಮಾಡುವ ಮೂಲಕ.ವಿಕಸನಗೊಳ್ಳುತ್ತದೆ. ಅದನ್ನು ನಾವು ಮಾನವರು ಮಾಡುತ್ತೇವೆ
ನಾವು ಎರವಲು ಪಡೆಯುತ್ತೇವೆ. ಮಾಪ೯ಡಿಸುವ ಮೂಲಕ ಹಳೆಯ ಭಾಗಗಳಿಂದ ನಾವು ಹೊಸ ಕಥೆಗಳನ್ನು ಹೇಳುತ್ತೇವೆ.
ನಾವು ಹೆಚ್ಚಿನ ಜ್ಞಾನವನ್ನು ಪಡೆದಾಗ ಏನಾಗುತ್ತದೆ ಎಂಬುದರ ಬಗ್ಗೆಯೂ ಯೋಚಿಸಿ. ಧರ್ಮವು ತುಂಬುತ್ತಿದ್ದ ಪ್ರಶ್ನೆಗಳು - ಮಿಂಚು ಎಲ್ಲಿಂದ ಬರುತ್ತದೆ ಅಥವಾ ರೋಗಗಳು ಏಕೆ ಹರಡುತ್ತವೆ - ಈಗ ಧರ್ಮದ ಬದಲು ವಿಜ್ಞಾನದಿಂದ ತುಂಬಿವೆ. ಮತ್ತು ವಿಜ್ಞಾನವು ಒಂದು ಪ್ರಶ್ನೆಗೆ ಉತ್ತರಿಸಿದಾಗ ಧರ್ಮವು ಹಿಂದೆ ಸರಿಯುತ್ತದೆ.
ಹಿಂದೆ ನಾವು ಮಳೆಗಾಗಿ ಪ್ರಾರ್ಥಿಸುತ್ತಿದ್ದೆವು.ಈಗ ನಾವು ಹವಾಮಾನ ವ್ಯವಸ್ಥೆಗಳನ್ನು ಅಧ್ಯಯನ ಮಾಡುತ್ತೇವೆ. .ಮಾನಸಿಕ ಅಸ್ವಸ್ಥತೆ ದೆವ್ವದ ಹಿಡಿತ ಎಂದು ನಾವು ಭಾವಿಸುತ್ತಿದ್ದೆವು. ಈಗ ನಾವು ಮನೋವಿಜ್ಞಾನ ಮತ್ತು ನರವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದೇವೆ. ಜ್ಞಾನ ಮುಂದುವರೆದಂತೆ ಧರ್ಮವು ಹಿಮ್ಮೆಟ್ಟುತ್ತದೆ. ಅದು ನಿಜವಾಗಿದ್ದರೆ ಅದು, ಧರ್ಮವು, ಹಿಮ್ಮೆಟ್ಟುವುದಿಲ್ಲ ಆದರೆ ಉತ್ತಮವಾದ ಜ್ಞಾನವು ಅವುಗಳನ್ನು ಬದಲಾಯಿಸಿದಾಗ ಮಾನವ ನಿರ್ಮಿತ ವಿಚಾರಗಳು ಹಾಗೆ ಮಾಡುತ್ತವೆ - ಹಿಮ್ಮೆಟ್ಟುತ್ತವೆ. .
ಪ್ರಾರ್ಥನೆಯು ಸಹ ಇದನ್ನು ಬಹಿರಂಗಪಡಿಸುತ್ತದೆ . ಪ್ರತಿದಿನ ಶತಕೋಟಿ ಪ್ರಾರ್ಥನೆಗಳು ಉತ್ತರಿಸುವುದಿಲ್ಲ. ಜನರು ಶಾಂತಿ ಆರೋಗ್ಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತಾರೆ . ಆದರೆ ರೋಗಗಳು ಸಂಭವಿಸುತ್ತಲೇ ಇರುತ್ತವೆ, ಯುದ್ಧಗಳು ನಡೆಯುತ್ತವೆ , ಅಪಘಾತಗಳಲ್ಲಿ ಜನ ಸಾಯುತ್ತಲೇ ಇರುತ್ತಾರೆ.
ಜಗತ್ತು ನೈಸರ್ಗಿಕ ನಿಯಮಗಳಿಂದ ನಡೆಯುತ್ತದೆ , ದೈವಿಕ ಹಸ್ತಕ್ಷೇಪದಿಂದಲ್ಲ
ಜನರು ಲಾಟರಿಗಳನ್ನು ಗೆಲ್ಲುತ್ತಾರೆ ಮತ್ತು ಪ್ರಾರ್ಥನೆಯನ್ನು ಲೆಕ್ಕಿಸದೆ ಮಕ್ಕಳನ್ನು ಕಳೆದುಕೊಳ್ಳುತ್ತಾರೆ.
ಅವು ದೇವರು ಪ್ರಾರ್ಥನೆಗಳನ್ನು ಕೇಳುವ ಪುರಾವೆಯಲ್ಲ. ಅದು ಯಾದೃಚ್ಛಿಕತೆ, ಅದೃಷ್ಟ, ಕಾರಣ ಮತ್ತು ಪರಿಣಾಮ.
ಪ್ರಾರ್ಥನೆಯು ಶಕ್ತಿಯುತವಾಗಿರುತ್ತದೆ ಏಕೆಂದರೆ ಅದು ಭರವಸೆಯನ್ನು ನೀಡುತ್ತದೆ ಆದರೆ ಅದು ವಾಸ್ತವದ ನಿಯಮಗಳನ್ನು ಬದಲಾಯಿಸುವುದಿಲ್ಲ.
ಅಂತಿಮವಾಗಿ ಇದರ ಬಗ್ಗೆ ಯೋಚಿಸಿ .
ಧರ್ಮ ನಿಜವಾಗಿದ್ದರೆ ಅದು ಸ್ಪಷ್ಟವಾಗಿರುತ್ತದೆ. ಅದು ಸಾರ್ವತ್ರಿಕವಾಗಿರುತ್ತದೆ . ಎಲ್ಲರಿಗೂ ಅದು ತಿಳಿದಿರುತ್ತದೆ - ಅದನ್ನು ಕೇವಲ ನಂಬುವುದಲ್ಲ. .ನಾವು ಸಾವಿರಾರು ಸ್ಪರ್ಧಾತ್ಮಕ ಧಾರ್ಮಿಕ ಹಕ್ಕುಗಳ ಜಗತ್ತಿನಲ್ಲಿ ವಾಸಿಸುತ್ತೇವೆ . ಎಲ್ಲವೂ ವಿಭಿನ್ನವಾಗಿ ಹೇಳುತ್ತವೆ . ಎಲ್ಲವೂ ಸತ್ಯವೆಂದು ಹೇಳಿಕೊಳ್ಳುತ್ತವೆ .ಆದರೆ ಅದು ನಾವು ವಾಸಿಸುವ ಪ್ರಪಂಚವಲ್ಲ
ಸತ್ಯವು ಹಾಗೆ ಕಾಣುವುದಿಲ್ಲ . ಮಾನವ ಕಥೆ ಹೇಳುವಿಕೆಯು ಹಾಗೆ ಕಾಣುತ್ತದೆ .
ಸರಳವಾದ ವಿವರಣೆಯೊಂದು ಎಲ್ಲಾ ಸಂಗತಿಗಳಿಗೆ , ಎಲ್ಲಾ ವಿರೋಧಾಭಾಸಗಳು ಎಲ್ಲಾ ಅಸಂಗತೆಗಳಿ ಗೆ ಸರಿಹೊಂದುತ್ತದೆ , ಉತ್ತರಿಸುತ್ತದೆ ;
ಇದು :
ಧರ್ಮವನ್ನು ಜನರೇ ಸೃಷ್ಟಿಸಿದ್ದಾರೆ. ದುಷ್ಟ ಜನರಲ್ಲ, ಮೂರ್ಖ ಜನರಲ್ಲ, ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು.
ಅಸ್ತವ್ಯಸ್ತವಾಗಿರುವ ಅಸ್ತಿತ್ವದಲ್ಲಿ ಅರ್ಥವನ್ನು ಸೃಷ್ಟಿಸಲು ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುತ್ತಾರೆ.
ಧರ್ಮವು ಮಾನವ ಆವಿಷ್ಕಾರ, ಸೃಜನಶೀಲ, ಶಕ್ತಿಶಾಲಿ, ಪ್ರಭಾವಿ, ಕೆಲವೊಮ್ಮೆ ಸುಂದರ ಕೆಲವೊಮ್ಮೆ ಭಯಾನಕ,
ಆದರೆ ಆರಂಭದಿಂದ ಅಂತ್ಯದ ವರೆಗೂ ಮಾನವನ ಸೃಷ್ಟಿ
(ನಂಬಿಕೆಯ ಮೇಲೆ ತರ್ಕ - LOGIC OVER FAITH Podcast)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ