‘ಮಧ್ಯಮ ಆದಾಯದ ಬಲೆ’ “ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ ಆದಲ್ಲಿ ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು” 2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು ಮತ್ತು ಪದಗುಚ್ಛವನ್ನು ಸೂಚಿಸಲಾಯಿತು. ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ. 2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ ಎಂಬುದು ಸ್ಪಷ್ಟವಾಗಿ ತೋರಿತ್ತು. ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ ವಿಶ್ವಾಸಾರ್ಹ ಸಿದ್ಧಾಂತವನ್ನು, ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು, ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು. 2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ ವಿಷಯವ...
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು
ಕರ್ನಾಟಕದಲ್ಲಿ ಕಾನೂನು ಎಲ್ಲಿದೆ? ಕರ್ನಾಟಕದಲ್ಲಿ ಕಾನೂನು ಆಳ್ವಿಕೆಯ ಕುರಿತು ರಾಷ್ಟ್ರಪತಿಗಳಿಗೆ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟಗಳು ( Peoples Unions for Civil Liberties - PUCL) ಬರೆದ ಪತ್ರ 16 ಫೆಬ್ರುವರಿ 2022 ಗೌರವಾನ್ವಿತರೇ, ಬಸವರಾಜ್ ಬೊಮ್ಮಾಯಿ ಅವರು ಜುಲೈ 2021 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆಗಿನಿಂದಲೂ ಕರ್ನಾಟಕದಲ್ಲಿ ಕಾನೂನು ಮತ್ತು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಗಳ ಹದಗೆಟ್ಟ ಸ್ಥಿತಿಯ ಬಗ್ಗೆ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ ಗಳು ( Peoples Unions for Civil Liberties - PUCL - ಪಿ ಯು ಸಿ ಎಲ್ ) ಆದ ನಾವು, ಈ ಪತ್ರ ಬರೆಯುತ್ತೇವೆ. ಬೊಮ್ಮಾಯಿ ಅವರ ಆಡಳಿತವು ಇಲ್ಲಿಯವರೆಗೆ ಕೋಮು ಆಧಾರಿತ ಪೋಲೀಸು ಕ್ರಮಗಳು ಮತ್ತು ದ್ವೇಷದ ಅಪರಾಧಗಳು, ಚರ್ಚ್ಗಳ ಮೇಲಿನ ದಾಳಿಗಳು ಮತ್ತು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವದನ್ನು ಕ೦ಡಿವೆ. ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ಗಿರಿಯ ಬಗ್ಗೆ ಏನು ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು “ಸಮಾಜದಲ್ಲಿ ಹಲವು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆಯಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಈ ಭಾವನೆಗಳನ...
ದಿಲ್ಲಿಯಿ೦ದ ಪಾಕಿಸ್ತಾನಕ್ಕೆ ಹೊರಟಿರುವ ನಿರಾಶ್ರಿತರು ದಿಲ್ಲಿ ರೈಲು ನಿಲ್ದಾಣದಲ್ಲಿ - , ಸಪ್ಟ೦ಬರ್ ೧೯೪೭ ೧೯೪೭ರಲ್ಲಿ ಜಮ್ಮು ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಕರಣ್ ಥಾಪರ್ ಅಂಕಣವನ್ನು ' ಏಷ್ಯನ್ ಏಜ್' ದಿನಪತ್ರಿಕೆ ಮೊದಲು ಪ್ರಕಟಿಸಿ ಅನ೦ತರ ಅದೇ ಅಂಕಣವನ್ನು ತಡೆಹಿಡಿಯಲು "ಮಾಲೀಕರು ನಿರ್ಧರಿಸಿದ್ದಾರೆ" ಎಂದು ತಿಳಿಸಲಾಯಿತು. ಲೇಖನವು ಪ್ರಧಾನಿ ಮೋದಿಯವರ ‘ವಿಭಜನೆಯ ಭಯಾನಕ ಸ್ಮರಣೆಯ ದಿನ'ವನ್ನು ಪ್ರಶ್ನಿಸಿತ್ತು. ಅಜೋಯ್ ಆಶೀರ್ವಾದ್ ಮಹಾಪ್ರಶಸ್ತಾ ದಿ ವಯರ್ 25 / ಆಗಸ್ಟ್ / 2021 ವಿಭಜನೆಯ ಸಮಯದಲ್ಲಿ ಜಮ್ಮುವಿನ ಮುಸ್ಲಿಮರ ವಿರುದ್ಧ ನಡೆದ ಹಿ೦ಸಾಚಾರ ವನ್ನು ಪ್ರಸ್ತಾಪಿಸಿದ್ದಕ್ಕಾಗಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರು ತಮ್ಮ ಪಾಕ್ಷಿಕ ಅಂಕಣವನ್ನು 'ಏಷ್ಯನ್ ಏಜ್' ಪತ್ರಿಕೆಯು ಪ್ರಕಟಿಸಿದ ನ೦ತರ ಹಿ೦ತೆಗೆದುಕೊ೦ಡದ್ದನ್ನು ಅನುಭವಿಸ ಬೇಕಾಯಿತು. ಇದು ನರೇಂದ್ರ ಮೋದಿ ಸರ್ಕಾರದ ಬಹುಸಂಖ್ಯಾವಾದದ ಬಯಕೆಗಳಿಗೆ ಭಾರತೀಯ ಮಾಧ್ಯಮ ಸಂಸ್ಥೆಯೊ೦ದು ಶರಣಾದ ಇತ್ತೀಚಿನ ಘಟನೆಯಾದ೦ತೆ ತೋರುತ್ತದೆ. ಥಾಪರ್ ಅವರು ' ದಿ ವೈರ್' ಗೆ ಹೇಳಿದ ಪ್ರಕಾರ ತಮ್ಮ ಅ೦ಕಣ "ಏಸ್ ಐ ಸೀ ಇಟ್" (‘ನಾನು ಕ೦ಡ೦ತೆ’)ಅನ್ನು ಆಗಸ್ಟ್ 20, 2021 ರಂದು ಪ್ರಕಟಿಸಿದ ನಂತರ, ಈ ರಾ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ