‘ಮಧ್ಯಮ ಆದಾಯದ ಬಲೆ’ “ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ ಆದಲ್ಲಿ ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು” 2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು ಮತ್ತು ಪದಗುಚ್ಛವನ್ನು ಸೂಚಿಸಲಾಯಿತು. ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ. 2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ ಎಂಬುದು ಸ್ಪಷ್ಟವಾಗಿ ತೋರಿತ್ತು. ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ ವಿಶ್ವಾಸಾರ್ಹ ಸಿದ್ಧಾಂತವನ್ನು, ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು, ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು. 2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ ವಿಷಯವ...
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು
ಹರಿದ್ವಾರದ ದ್ವೇಷದ ದುರಹಂಕಾರ ಕೂಡಲೇ ನಿಲ್ಲಿಸಬೇಕು ವಸುಂಧರಾ ಸಿರ್ನಾಟೆ ಡ್ರೆನನ್ ದಿ ಹಿ೦ದು ದಿನ ಪತ್ರಿಕೆ ಡಿಸೆಂಬರ್ 30, 2021 ಒಂದು ಉನ್ಮಾದಪೂರ್ಣ ವಿವೇಚನಾರಹಿತತೆಯನ್ನು, ಎಲ್ಲರ ಹಕ್ಕುಗಳ ಮೇಲೆ ಪ್ರಭಾವ ಬೀರುವ ದ್ವೇಷ ತುಂಬಿದ ಪದಗಳು ಸೇರಿದ೦ತೆ , ಭಾರತೀಯ ಸಮಾಜದಲ್ಲಿ ಬೀಜ ನೆಡಲಾಗುತ್ತಿದೆ. ಡಿಸೆಂಬರ್ 17 ಮತ್ತು 19, 2021ರ ನಡುವೆ ಒಂದು ಉಗ್ರಗಾಮಿ ಹಿಂದೂ ಧಾರ್ಮಿಕ ಸಭೆಯು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಿತು , ಅಲ್ಲಿ ಭಾಷಣಕಾರರು ನಿಖರವಾಗಿ ಗುರಿಪಡಿಸಿದ ದ್ವೇಷ ಸಂದೇಶಗಳನ್ನು ವರ್ಧಿಸಿದರು. ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಜುನಾ ಅಖಾರ ಪಂಗಡ ದ ಉನ್ನತ ಶ್ರೇಣಿಯ ಅಧಿಕಾರಿಯಾದ ಯತಿ ನರಸಿಂಹಾನಂದ ಸರಸ್ವತಿ ಅವರು ಆಯೋಜಿಸಿದ್ದ ಈ ಸಭೆಯಲ್ಲಿ ಭಾರತ ಮತ್ತು ಹಿಂದೂಗಳಿಗೆ ಇಸ್ಲಾಮಿಕ್ ಬೆದರಿಕೆಯ ಸುಳ್ಳು ಭಯವನ್ನು ಎತ್ತುವ ಅನೇಕ ಭಾಷಣಕಾರರು ಭಾಗವಹಿಸಿದ್ದರು. ದ್ವೇಷದ ಕೇಳಿಯ ಹಬ್ಬ ಬಲಪಂಥೀಯ ಸಂಘಟನೆಯಾದ ಹಿಂದೂ ರಕ್ಷಣಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಬೋಧಾನಂದ ಗಿರಿ : “... ನೀವು ಇದನ್ನು ದೆಹಲಿ ಗಡಿಯಲ್ಲಿ ನೋಡಿದ್ದೀರಿ, ಅವರು ಹಿಂದೂಗಳನ್ನು ಕೊಂದು ಗಲ್ಲಿಗೇರಿಸಿದ್ದಾರೆ. ಇನ್ನು ಸಮಯವಿಲ್ಲ, ಈಗಿರುವ ಪ್ರಕರಣ ಏನೆಂದರೆ ನೀವು ಈಗಲೇ ಸಾಯಲು ತಯಾರಿ ಮಾಡಿಕೊಳ್ಳಿ, ಇಲ್ಲವೇ ಕೊಲ್ಲಲು ಸ...
‘ಇದು ಭಾರತದ ಅತ್ಯಂತ ಒತ್ತಡದ ನಗರ’: ಕೋಚಿಂಗ್ ರಾಜಧಾನಿ ಕೋಟಾದ ಕರಾಳ ಮುಖ ಆತ್ಮಹತ್ಯೆಗಳು ಪ್ರವೇಶ ಪರೀಕ್ಷೆಗಳಿಗೆ ನೂಕುನುಗ್ಗಲು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆ ಹೇರುವ ಕಠೋರ ಸಂಸ್ಕೃತಿಯ ಮೇಲೆ ಗಮನ ಸೆಳೆಯುತ್ತವೆ ಹನ್ನಾ ಎಲ್ಲಿಸ್-ಪೀಟರ್ಸನ್ ಮತ್ತು ಶೇಖ್ ಅಜೀಜುರ್ ರೆಹಮಾನ್ ಕೋಟಾದಲ್ಲಿ ಸೋಮ 9 ಅಕ್ಟೋಬರ್ 2023 ಲ೦ಡನ್ನಿನ ‘ದಿ ಗಾರ್ಡಿಯನ್’ ದಿನಪತ್ರಿಕೆ. ಪ್ರತಿ ವರ್ಷ ಕೋಟಾಕ್ಕೆ ಬ೦ದು ಸೇರುವ 300,000 ವಿದ್ಯಾರ್ಥಿಗಳ ಮಟ್ಟಿಗೆ, ಭಾರತದ ರಾಜಸ್ಥಾನದ ಈ ಬಿಸಿ, ಧೂಳಿನ ನಗರವು ಅಧ್ಯಯನಸಾಧನೆಯ ಪ್ರದರ್ಶನದ ‘ಪ್ರೆಷರ್ ಕುಕ್ಕರ್ ’ ಆಗಿದೆ. ಅಲ್ಲಿ ದಿನಕ್ಕೆ 18 ಗಂಟೆಗಳ ಅಧ್ಯಯನವು ಸಾಮಾನ್ಯವಾಗಿದೆ . ಇಲ್ಲಿ ಪರೀಕ್ಷೆಯ ಅಂಕಗಳು ಮಾತ್ರ ಗಣನಾರ್ಹ . ಕೆಲವರು ಭಾರತದ ಮುಂದಿನ ಪೀಳಿಗೆಯ ವೈದ್ಯರು ಮತ್ತು ಇಂಜಿನಿಯರ್ಗಳಾಗುತ್ತಾರೆ; ಆದರೆ ಇತರರಿಗೆ, ದುರದೃಷ್ಟದಿಂದ ಈ ಅನುಭವ ಅವರನ್ನು ಮುರಿಯುತ್ತದೆ. ಕೋಟಾ ಇತ್ತೀಚಿನ ದಶಕಗಳಲ್ಲಿ ಭಾರತದ "ಕೋಚಿಂಗ್ ಕ್ಯಾಪಿಟಲ್" ಎಂದು ಹೆಸರುವಾಸಿಯಾಗಿದೆ, ಅಲ್ಲಿ ಸುಮಾರು ಒಂದು ಡಜನ್ ತಜ್ಞ ಸಂಸ್ಥೆಗಳು ವೈದ್ಯಕೀಯ ಶಾಸ್ತ್ರ ಅಥವಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶಕ್ಕೆ ಅತ್ಯ೦ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತೀವ್ರವಾದ ಅಧ್ಯಯನ ನೀಡುತ್ತಿವೆ. 1.4 ಶತಕೋಟಿ ಜನರಿರುವ ಭಾರತದ ಜನ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ