ಕರ್ನಾಟಕದಲ್ಲಿ ಕಾನೂನು ಎಲ್ಲಿದೆ? ಕರ್ನಾಟಕದಲ್ಲಿ ಕಾನೂನು ಆಳ್ವಿಕೆಯ ಕುರಿತು ರಾಷ್ಟ್ರಪತಿಗಳಿಗೆ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟಗಳು ( Peoples Unions for Civil Liberties - PUCL) ಬರೆದ ಪತ್ರ 16 ಫೆಬ್ರುವರಿ 2022 ಗೌರವಾನ್ವಿತರೇ, ಬಸವರಾಜ್ ಬೊಮ್ಮಾಯಿ ಅವರು ಜುಲೈ 2021 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆಗಿನಿಂದಲೂ ಕರ್ನಾಟಕದಲ್ಲಿ ಕಾನೂನು ಮತ್ತು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಗಳ ಹದಗೆಟ್ಟ ಸ್ಥಿತಿಯ ಬಗ್ಗೆ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ ಗಳು ( Peoples Unions for Civil Liberties - PUCL - ಪಿ ಯು ಸಿ ಎಲ್ ) ಆದ ನಾವು, ಈ ಪತ್ರ ಬರೆಯುತ್ತೇವೆ. ಬೊಮ್ಮಾಯಿ ಅವರ ಆಡಳಿತವು ಇಲ್ಲಿಯವರೆಗೆ ಕೋಮು ಆಧಾರಿತ ಪೋಲೀಸು ಕ್ರಮಗಳು ಮತ್ತು ದ್ವೇಷದ ಅಪರಾಧಗಳು, ಚರ್ಚ್ಗಳ ಮೇಲಿನ ದಾಳಿಗಳು ಮತ್ತು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವದನ್ನು ಕ೦ಡಿವೆ. ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ಗಿರಿಯ ಬಗ್ಗೆ ಏನು ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು “ಸಮಾಜದಲ್ಲಿ ಹಲವು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆಯಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಈ ಭಾವನೆಗಳನ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ