ಹರಿದ್ವಾರದ ದ್ವೇಷದ ದುರಹಂಕಾರ ಕೂಡಲೇ ನಿಲ್ಲಿಸಬೇಕು ವಸುಂಧರಾ ಸಿರ್ನಾಟೆ ಡ್ರೆನನ್ ದಿ ಹಿ೦ದು ದಿನ ಪತ್ರಿಕೆ ಡಿಸೆಂಬರ್ 30, 2021 ಒಂದು ಉನ್ಮಾದಪೂರ್ಣ ವಿವೇಚನಾರಹಿತತೆಯನ್ನು, ಎಲ್ಲರ ಹಕ್ಕುಗಳ ಮೇಲೆ ಪ್ರಭಾವ ಬೀರುವ ದ್ವೇಷ ತುಂಬಿದ ಪದಗಳು ಸೇರಿದ೦ತೆ , ಭಾರತೀಯ ಸಮಾಜದಲ್ಲಿ ಬೀಜ ನೆಡಲಾಗುತ್ತಿದೆ. ಡಿಸೆಂಬರ್ 17 ಮತ್ತು 19, 2021ರ ನಡುವೆ ಒಂದು ಉಗ್ರಗಾಮಿ ಹಿಂದೂ ಧಾರ್ಮಿಕ ಸಭೆಯು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಿತು , ಅಲ್ಲಿ ಭಾಷಣಕಾರರು ನಿಖರವಾಗಿ ಗುರಿಪಡಿಸಿದ ದ್ವೇಷ ಸಂದೇಶಗಳನ್ನು ವರ್ಧಿಸಿದರು. ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಜುನಾ ಅಖಾರ ಪಂಗಡ ದ ಉನ್ನತ ಶ್ರೇಣಿಯ ಅಧಿಕಾರಿಯಾದ ಯತಿ ನರಸಿಂಹಾನಂದ ಸರಸ್ವತಿ ಅವರು ಆಯೋಜಿಸಿದ್ದ ಈ ಸಭೆಯಲ್ಲಿ ಭಾರತ ಮತ್ತು ಹಿಂದೂಗಳಿಗೆ ಇಸ್ಲಾಮಿಕ್ ಬೆದರಿಕೆಯ ಸುಳ್ಳು ಭಯವನ್ನು ಎತ್ತುವ ಅನೇಕ ಭಾಷಣಕಾರರು ಭಾಗವಹಿಸಿದ್ದರು. ದ್ವೇಷದ ಕೇಳಿಯ ಹಬ್ಬ ಬಲಪಂಥೀಯ ಸಂಘಟನೆಯಾದ ಹಿಂದೂ ರಕ್ಷಣಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಬೋಧಾನಂದ ಗಿರಿ : “... ನೀವು ಇದನ್ನು ದೆಹಲಿ ಗಡಿಯಲ್ಲಿ ನೋಡಿದ್ದೀರಿ, ಅವರು ಹಿಂದೂಗಳನ್ನು ಕೊಂದು ಗಲ್ಲಿಗೇರಿಸಿದ್ದಾರೆ. ಇನ್ನು ಸಮಯವಿಲ್ಲ, ಈಗಿರುವ ಪ್ರಕರಣ ಏನೆಂದರೆ ನೀವು ಈಗಲೇ ಸಾಯಲು ತಯಾರಿ ಮಾಡಿಕೊಳ್ಳಿ, ಇಲ್ಲವೇ ಕೊಲ್ಲಲು ಸ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ