ಪೋಸ್ಟ್‌ಗಳು

  ಧರ್ಮ ಅಥವಾ ದೈವ ವಿಶ್ವಾಸವನ್ನು ಮನುಷ್ಯರೇ ಕಂಡುಹಿಡಿದರು: ದೇವರಲ್ಲ. (ಟಿಪ್ಪಣಿ : ಈ ಲೇಖನದಲ್ಲಿ ಬಹುವಾಗಿ ಧರ್ಮ ಎಂಬ ಪದವನ್ನು  ಆಂಗ್ಲ ಪದ Religion ಗೆ    ಅನುಕೂಲಕರವಾದ ಸಂಕ್ಷಿಪ್ತ ಪರ್ಯಾಯ ರೂಪವಾಗಿ ಬಳಸಲಾಗುತ್ತದೆ. ) ಒಂದು ಸರಳ ಅವಲೋಕನದಿಂದ ಪ್ರಾರಂಭಿಸೋಣ. ಪ್ರಪಂಚದಾದ್ಯಂತ ಮಾನವರು ಸಾವಿರಾರು ವಿಭಿನ್ನ ಧರ್ಮಗಳನ್ನು ನಂಬುತ್ತಾರೆ - ಕೆಲವೇ ಅಲ್ಲ , ಆದರೆ ಅಕ್ಷರಶಃ ಸಾವಿರಾರು,  ಪ್ರತಿಯೊಂದೂ ಅಂತಿಮ ಸತ್ಯವನ್ನು ಹೊಂದಿದೆ ಎಂದು ಹೇಳಿ ಕೊಳ್ಳುತ್ತದೆ, ಪ್ರತಿಯೊಂದೂ ವಿಭಿನ್ನ, ವಿಭಿನ್ನ ಸೃಷ್ಟಿ ಕಥೆಗಳು, ವಿಭಿನ್ನ ನಿಯಮಗಳು, ಆಚರಣೆಗಳು, ಮತ್ತು ಮರಣಾನಂತರದ ಜೀವನ ನಂಬಿಕೆಗಳು.  ಕೆಲವರು ಒಬ್ಬನೇ  ದೇವರು ಇದ್ದಾನೆ ಎಂದು ಹೇಳುತ್ತಾರೆ, ಇತರರು ದೇವರು ಹಲವರು  ಎನ್ನುತ್ತಾರೆ. ಕೆಲವರು ಮೂರ್ತಿಗಳು ಬಾರದು ಎಂದು ಹೇಳಿದರೆ , ಇತರ ದೈವ ವಿಶ್ವಾಸ ಪಧ್ದತಿಗಳು  ಪ್ರತಿಮೆಗಳಿಂದ ತುಂಬಿವೆ. . ಕೆಲವರು ಮರಣಾನಂತರ  ಸ್ವರ್ಗ ಮತ್ತು ನರಕಗಳು  ಅಂತಿಮ , ಶಾಶ್ವತ ಎಂದು ಹೇಳುತ್ತಾರೆ, ಇತರರು ಪುನರ್ಜನ್ಮ ಸಂಭವಿಸುತ್ತದೆ ಎಂದು ವಾದಿಸುತ್ತಾರೆ   ಮಾನವರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಕಥೆಗಳು ಮತ್ತು ವ್ಯವಸ್ಥೆಗಳನ್ನು ಪ್ರಯತ್ನಿಸುತ್ತಾ ಬಹುಸಂಖ್ಯೆಯಲ್ಲಿ  ವಿವಿಧ ವಿಚಾರಗಳನ್ನು     ಪರೀಕ್ಷಿಸುತ್ತಿರುವ...
ಇಮೇಜ್
    ಚಾರ್ಲ್ಸ್ ಡಾರ್ವಿನ್ ಪ್ರಸ್ತಾವನೆ        ದೇವರು ತನ್ನ ಸ್ವಂತ  ಸ್ವರೂಪ ಮತ್ತು ಹೋಲಿಕೆಯಲ್ಲಿ ಮನುಕುಲವನ್ನು ಸೃಷ್ಟಿಸಿದ್ದಾನೆ ಎಂಬ ನಂಬಿಕೆಯನ್ನು  ಜನಸಾಮಾನ್ಯರ೦ತೆ ೧೯ ನೇ ಶತಮಾನದ ಮಧ್ಯಭಾಗದವರೆಗೆ ಹೆಚ್ಚಿನ ಪಾಶ್ಚಿಮಾತ್ಯ ವಿಜ್ಞಾನಿಗಳೂ  ಹೊಂದಿದ್ದರು        ಗ್ರಹದ ಎಲ್ಲಾ ಜೀವಿಗಳು ದೈವಿಕ ಶಕ್ತಿಯೊಂದರಿ೦ದ  ಹುಟ್ಟಿಕೊಂಡಿವೆ ಎಂದು ಅವರು ಭಾವಿಸಿದರು.              ಚಾರ್ಲ್ಸ್ ಡಾರ್ವಿನ್ ಬರುವವರೆಗೆ. ಚಾರ್ಲ್ಸ್ ಡಾರ್ವಿನ್        ಕೆಲವು ಸಂಶೋಧಕರು ಈಗಾಗಲೇ  ಜೀವಿಗಳ ಜಾತಿ ಅಥವಾ ವರ್ಗಗಳ ವಿಕಸನದ ಬಗ್ಗೆ ಮಾತನಾಡುತ್ತಿದ್ದರಾದರೂ  ಬ್ರಿಟಿಷ   ನೈಸರ್ಗಿಕವಾದಿ ವಿಜ್ಞಾನಿ ಡಾರ್ವಿನ್ ನೈಸರ್ಗಿಕ ಆಯ್ಕೆಯಿಂದ ವಿಕಸನವು ಹೇಗೆ ಸಂಭವಿಸಬಹುದು ಎಂಬುದನ್ನು ಪುರಾವೆಗಳೊಂದಿಗೆ ವಿವರಿಸಿದ ಮೊದಲಿಗರು.          ಅವರ ಸಿದ್ಧಾಂತವು, ಮಾನವರ ಉಗಮದ ಬಗ್ಗೆ ಹೊಸ ವಿವರಣೆಯನ್ನು ನೀಡುವುದರ ಮೂಲಕ ಜೀವಶಾಸ್ತ್ರವನ್ನು ಆಮೂಲಾಗ್ರವಾಗಿ ಬದಲಾಯಿಸಿತು       ಇದು ಅವರನ್ನು ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರನ್ನಾಗಿ ಮಾಡಿತು.         ಆ...
ಇಮೇಜ್
  ‘ಮಧ್ಯಮ ಆದಾಯದ ಬಲೆ’  “ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು   ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ  ಆದಲ್ಲಿ  ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು” 2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು  ಮತ್ತು ಪದಗುಚ್ಛವನ್ನು ಸೂಚಿಸಲಾಯಿತು.  ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ.  2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ  ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ  ಎಂಬುದು ಸ್ಪಷ್ಟವಾಗಿ ತೋರಿತ್ತು.  ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ  ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ  ವಿಶ್ವಾಸಾರ್ಹ ಸಿದ್ಧಾಂತವನ್ನು,  ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು,  ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು. 2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ  ವಿಷಯವ...
  ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ  ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ:   ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ ಸಂಪಾದಕೀಯ ನರೇಂದ್ರ ಮೋದಿಯವರಿಗೆ ಮತ್ತೊಂದು ಜನಾದೇಶ ನೀಡುವ ಬಗ್ಗೆ ಭಾರತೀಯ ಮತದಾರರು ತೀವ್ರವಾಗಿ ಯೋಚಿಸಬೇಕು ಬುಧವಾರ 17 ಏಪ್ರಿಲ್ 2024 ದೇಶವನ್ನು ಮುನ್ನಡೆಸುವ ಪೈಪೋಟಿಯನ್ನು  ಈಗಾಗಲೇ ಗೆದ್ದಿರುವ ಬಡಾಯಿಯ ನಡುವೆ ವಿಶ್ವದ ಅತಿದೊಡ್ಡ ಚುನಾವಣೆಗಳು ಭಾರತದಲ್ಲಿ ಈ ವಾರ  ಪ್ರಾರಂಭವಾಗಿವೆ.  ನರೇಂದ್ರ ಮೋದಿಯವರು ದೊಡ್ಡ ಸಂಸದೀಯ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಅವರ ಸಾಧನೆಯು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ  ಸಾಧನೆಯನ್ನು ಸರಿಗಟ್ಟುತ್ತದೆ.  ಚುನಾವಣಾ ಫಲಿತಾಂಶ ಏನೇ ಇರಲಿ,  ಭಾರತೀಯ ಪ್ರಜಾಪ್ರಭುತ್ವ ಸೋಲುವದ೦ತೂ ಖಚಿತ.  ಯಾಕೆ ? ಶ್ರೀ ನೆಹರೂ ಅನಾಮಧೇಯವಾಗಿ ತಮ್ಮದೇ ನಾಯಕತ್ವವನ್ನು ತಾವೇ ಟೀಕಿಸಿ ದ್ದರೆ, ಅವರಿಗೆ ಭಿನ್ನವಾಗಿ ಶ್ರೀ ಮೋದಿಯವರು ತಮ್ಮ ವಿರೋಧಿಗಳನ್ನು ಅಸಡ್ಡೆಯಿ೦ದ ಕಾಣುತ್ತಾರೆ. ದೈನಂದಿನ ಆಡಳಿತದಲ್ಲಿ ವಿಚಾರಗಳ ಸ್ಪರ್ಧೆಗೆ ಅವಕಾಶ ನೀಡುವದಲ್ಲದೆ   ನಾಗರಿಕರನ್ನು ಸಮಾನವಾಗಿ ಪರಿಗಣಿಸಿದಾಗ ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೋದಿಯವರ ಭಾರತದಲ್ಲಿ ಇವುಗಳ...